Webdunia - Bharat's app for daily news and videos

Install App

ಸಾಹಿತಿ ನಿಸಾರ್ ಅಹ್ಮದ್ ಅಗಲಿಕೆಗೆ ಸುಮಲತಾ ಅಂಬರೀಶ್, ಸಿ.ಟಿ.ರವಿ ಸಂತಾಪ

Webdunia
ಭಾನುವಾರ, 3 ಮೇ 2020 (17:34 IST)
ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರ ಅಗಲಿಕೆಗೆ ಸಂಸದೆ ಸುಮಲತಾ ಅಂಬರೀಶ್, ಸಚಿವ ಸಿ.ಟಿ.ರವಿ ಸಂತಾಪ ಸೂಚಿಸಿದ್ದಾರೆ.

ಜೋಗದ ಸಿರಿಯನ್ನು ನಯಾಗರದಾಚೆಗೂ ದಾಟಿಸಿದ ಕವಿ,  ಸಮಾಜವನ್ನು ಕುರಿ ಮಂದೆಯಾಗದಂತೆ ಶಬ್ದಗಳಲ್ಲೇ ಎಚ್ಚರಿಸಿದವ ಸಂತ ಸದೃಶ-ಸಂವೇದನಾಶೀಲ. ಸೂಟು ಬೂಟು ಧಿರಿಸಿನ ಅಪ್ಪಟ ಮೈಸೂರು ಪೇಟದ ಮನಸ್ಸಿನ ನಿಸಾರ ಅಹಮದ್ ಅವರ ದೇಹಾಂತ್ಯ ಕನ್ನಡಮ್ಮನ ಮಕ್ಕಳಿಗೆ ತುಂಬಲಾರದ ನೋವು.

ಅವರು ಬರೆಯುತ್ತಿರಲಿ, ಬರೆಯದೇ ಇರುತ್ತಿರಲಿ ನಿಸಾರರ ಉಪಸ್ಥಿತಿ ಕನ್ನಡಕ್ಕೊಂದು ಧೈರ್ಯ ವನ್ನು ತುಂಬುತ್ತಿತ್ತು. ಇನ್ನವರ ಸಾಲುಗಳು ನಮ್ಮನ್ನು ಸದಾ ಎಚ್ಚರಿಸುತ್ತಿರಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹೀಗಂತ ಸಂಸದೆ ಸುಮಲತಾ ಅಂಬರೀಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿತ್ಯೋತ್ಸವ ಕವಿ ಎಂದೆ  ಹೆಸರಾಗಿದ್ದ ನಿಸಾರ್ ಅಹ್ಮದ್ ಅವರು ಸಾಹಿತ್ಯ  ರಚನೆಯಿಂದ  ಕನ್ನಡ ಸಾಹಿತ್ಯವನ್ನು  ಶ್ರೀಮಂತಗೊಳಿಸಿದ್ದರು. ಅವರ  ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ  ತುಂಬಲಾರದ ನಷ್ಟವನ್ನು ಉಂಟುಮಾಡಿದೆ  ಎಂದು ಸಚಿವ ಸಿ.ಟಿ.ರವಿ ಸಂತಾಪ ವ್ಯಕ್ತಪಡಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments