Select Your Language

Notifications

webdunia
webdunia
webdunia
webdunia

ಜಾಣೆ ಹುಡುಗಿ ಯಾಕೆ ಆತ್ಮಹತ್ಯೆ ಮಾಡ್ಕೊಂಡ್ಳು..?

ಜಾಣೆ ಹುಡುಗಿ ಯಾಕೆ ಆತ್ಮಹತ್ಯೆ ಮಾಡ್ಕೊಂಡ್ಳು..?
ಹುಬ್ಬಳ್ಳಿ , ಬುಧವಾರ, 26 ಅಕ್ಟೋಬರ್ 2016 (15:30 IST)
ಹುಬ್ಬಳ್ಳಿ: ಮನನೊಂದ ವಿದ್ಯಾರ್ಥಿನಿಯೊಬ್ಬಳು ತಾನಿದ್ದ ಹಾಸ್ಟೆಲ್ ಮೇಲದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ವಿದ್ಯಾನಗರದಲ್ಲಿ ನಡೆದಿದೆ.

 
ಸುಚಿತ್ರಾ ದಾಸರ್ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮೂಲತಃ ಗದಗ ಜಿಲ್ಲೆಯವಳಾದ ಆಕೆ, ನಗರದ ಪ್ರೇರಣಾ ಕಾಲೇಜ್ ನಲ್ಲಿ ಮೊದಲ ವರ್ಷ ಸೈನ್ಸ್ ಓದುತಿದ್ದಳು. ಓದಿನಲ್ಲಿ ಜಾಣೆಯಾಗಿದ್ದ ಆಕೆ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
 
ಆದರೆ, ಒಂದು ದಿನದ ಹಿಂದಷ್ಟೇ ಸುಚಿತ್ರಾಳ ತಂದೆ- ತಾಯ, ಮಗಳ ಯೋಗ ಕ್ಷೇಮ ವಿಚಾರಿಸಲು ಹಾಸ್ಟೆಲ್ ಗೆ ಬಂದಿದ್ದರು. ಸಂದರ್ಭದಲ್ಲಿ ಮೂವರ ನಡುವೆ ತೀವ್ರ ಜಗಳ ಉಂಟಾಗಿತ್ತು ಎನ್ನಲಾಗುತ್ತಿದೆ. ಹೆತ್ತವರ ಜೊತೆ ಜಗಳ ಮಾಡಿಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸಿದ ಡೊನಾಲ್ಡ್ ಟ್ರಂಪ್ ಸೊಸೆ