ರಂಗಯಾತ್ರೆ ಮುಗಿಸಿದ ಸುಭದ್ರಮ್ಮ ಮನ್ಸೂರು

Webdunia
ಗುರುವಾರ, 16 ಜುಲೈ 2020 (15:42 IST)
ನಾಡಿನ ಹಿರಿಯ ರಂಗಭೂಮಿ ಕಲಾವಿದೆ, ಖ್ಯಾತ ಗಾಯಕಿ ಸುಭದ್ರಮ್ಮ ಮನ್ಸೂರ್ ತಡರಾತ್ರಿ ತಮ್ಮ ರಂಗಪಯಣ ಮುಗಿಸಿ ಜೀವನದ ನಾಟಕಕ್ಕೆ ತೆರೆ ಎಳೆದಿದ್ದಾರೆ.

 ಅವರಿಗೆ 81 ವರ್ಷ ವಯಸ್ಸಾಗಿತ್ತು. ಬಳ್ಳಾರಿ ನಗರದ  ರೇಡಿಯೋಪಾರ್ಕ್ ಪ್ರದೇಶದ ಮನೆಯಲ್ಲಿ ವಾಸವಾಗಿದ್ದ ಅವರು 11 ಗಂಟೆ ಸುಮಾರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೆ ಪರಿಚಯದವರೂ ಬಂದು ಅವರನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಅವರ ಪತಿ ಮಲ್ಲಿಕಾರ್ಜುನ ಮನ್ಸೂರು ಅವರು ಈ ಮೊದಲೆ ಧೈವಾಧೀನರಾಗಿದ್ದರು.

ಚಿಕ್ಕಂದಿನಿಂದಲೇ ರಂಗಭೂಮಿಯಲ್ಲಿ ಬೆಳೆದು ಬಂದವರು, ಪೌರಾಣಿಕವಾಗಿ ರಕ್ತ ರಾತ್ರಿಯ ನಾಟಕದ ದ್ರೌಪದಿ ಪಾತ್ರ ಮತ್ತು ಸಾಮಾಜಿಕವಾಗಿ ಹೇಮರೆಡ್ಡಿ ಮಲ್ಲಮ್ಮನ ಪಾತ್ರ ಅಚ್ಚಳಿಯದೇ ಪ್ರೇಕ್ಷಕರ ಮನದಲ್ಲಿ ಎಂದೆಂದಿಗೂ ಇರುವಂತಹುದಾಗಿವೆ.

ಇನ್ನು ಅವರ ಸುಮಧುರ ಕಂಠದಿಂದ ವಚನಗಳ ಗಾಯನದಲ್ಲಿ  ಮೂಡಿ ಬರುತ್ತಿದ್ದ ಅಕ್ಕಮಹಾದೇವಿಯ 'ಬೆಟ್ಟದ ಮೇಲೊಂದು ಮನೆಯ ಮಾಡಿ' ಮತ್ತು ಹೇಮರೆಡ್ಡಿ ಮಲ್ಲಮ್ಮಳ ನಾಟಕದ 'ಜಯವೆಂದು ಬೆಳಗುವೆ ಮಲ್ಲಿಕಾರ್ಜುನನೆ" ಹಾಡುಗಳು ಎಂದಿಗೂ ಕೇಳುಗರ ಕರ್ಣದಲ್ಲಿ ಗುನುಗುತ್ತಲೇ ಇರುತ್ತವೆಂದರೆ ಆಶ್ಚರ್ಯವಲ್ಲ.

ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದ ಅವರು ಸುಮಧುರ ಸುಗಮ ಸಂಗೀತದ ಹಾಡುಗಳು ಕೇಳದವರಿಲ್ಲ.
ಕಳೆದ ವರ್ಷದ ವರೆಗೂ ಅವರು ಬಣ್ಣಹಚ್ಚಿ ನಟನೆ ಮಾಡಿದವರು, 1939 ರಿಂದ ಆರಂಭವಾದ ಅವರ ಈ ಜಗತ್ತಿನ ಬದುಕಿನ ಪಯಣ 2020 ರಲ್ಲಿ ಕೊನೆಗೊಂಡಿದೆ.

ಹಂಪಿ ಕನ್ನಡ ವಿವಿಯ ನಾಡೋಜ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಯಲಯದ ಗೌರವ ಡಾಕ್ಟರೇಟ್, ರಾಜ್ಯೋತ್ಸವ, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

ಅವರ ಮನೆಯ ಬಳಿ ಪಾರ್ಥಿವ ಶರೀರವನ್ನು ಇಡಲಾಗಿದ್ದು ಇಂದು ಸಂಜೆ ಮಧ್ಯಾಹ್ನ 3 ಗಂಟೆಗೆ ನಗರದ ರೂಪನಗುಡಿ ರಸ್ತೆಯ ಹರಿಶ್ಚಂದ್ರಘಾಟನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಷ್ಟೂಂತ ಸಹಿಸೋದು.. ತನಗೆ ಒಂದೇ ಸಮನೆ ಹೊಡೆಯುತ್ತಿದ್ದ ಮಹಿಳೆ ಮೇಲೆ ಈ ವ್ಯಕ್ತಿ ಏನು ಮಾಡಿದ್ರು ನೋಡಿ Video

ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಸರಿಯಾಗೇ ಗೂಸಾ ಕೊಟ್ಟ ಚಾಲಕ video

Video: ಎಎಪಿ ಆಡಳಿತವಿರುವ ಪಂಜಾಬ್ ನಲ್ಲೂ ಪೇಪರ್ ಲೀಕ್ ಆಗಿದೆ, ಏನಂತೀರಿ ಎಂದಿದ್ದಕ್ಕೆ ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ ನೋಡಿ ಟ್ರೋಲ್

ಸರಿಯಾಗೇ ಆಯ್ತು.. ಅಪ್ಪನ ಔಷಧಿ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟ ಯುವಕ: ಆದ್ರೆ ಆಕೆ ಮಾಡಿದ್ದೇನು Video

ಜೆನ್ ಜಿ ಯುವಕರ ಸೆಳೆಯಲು ಸಂಪುಟ ಸಹೋದ್ಯೋಗಿಗಳಿಗೆ ಕ್ರೇಜಿ ಐಡಿಯಾ ಕೊಟ್ಟ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments