Publish Date: Mon, 16 Oct 2023 (13:40 IST)
Updated Date: Mon, 16 Oct 2023 (14:20 IST)
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಬಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದೆ.310 ಅರಣ್ಯ ವೀಕ್ಷಕರ ನೇಮಕಾತಿ ಅಧಿಸೂಚನೆ ರದ್ದತಿಗೆ ಆಗ್ರಹಿಸಿ ಈಗಿನ ನೋಟಿಫಿಕೇಷನ್ ಕೂಡಲೇ ರದ್ದು ಮಾಡಬೇಕು,ಕೋವಿಡ್ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ನಿಲ್ಲಿಸಲಾಗಿತ್ತು.ಈಗ ಪರ್ಸೆಂಟೇಜ್ ಆದಾರದಲ್ಲಿ ಆಯ್ಕೆ ಮಾಡ್ತಿದ್ದಾರೆ ಇದನ್ನ ಕೂಡಲೇ ಹಿಂಪಡೆಯಬೇಕು.ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕು.ಎಸ್ ಎಸ್ ಎಲ್ ಸಿ ಅಂಕಗಳ ಮೇಲಿನ ಆಯ್ಕೆಗಳನ್ನ ರದ್ದುಪಡಿಸಿ. ಎಲ್ಲಾ ಅರ್ಹರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿ.ಸರ್ಕಾರಿ ಕೆಲಸದ ಆಸೆಯಲ್ಲಿದ್ದ ವಿದ್ಯಾರ್ಥಿಗಳ ಆಸೆಗೆ ಅರಣ್ಯ ಇಲಾಖೆ ಮಣ್ಣು ಹಾಕಿದೆ.ಕೂಡಲೇ ಹೊಸ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಿ.ಬೇಕೇ ಬೇಕು ಪರೀಕ್ಷೆ ಎಂದು ಅಭ್ಯರ್ಥಿಗಳು ವಿಭಿನ್ನ ವಾಗಿ ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ತಟ್ಟೆ ಹಿಡಿದು ದಯವಿಟ್ಟು ನಮ್ಮ ಆಸೆಗಳಿಗೆ ಮಣ್ಣಾಕಬೇಡಿ ಎಂದು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.