Webdunia - Bharat's app for daily news and videos

Install App

ದಾರಿ ತಪ್ಪಿದ ಮಗ: ಕೊಲ್ಲಲು ಅನುಮತಿ ಕೊಡಿ ಇಲ್ಲವೇ ಜೈಲಿಗೆ ಹಾಕಿ ಎಂದ ತಾಯಿ

Sampriya
ಮಂಗಳವಾರ, 12 ನವೆಂಬರ್ 2024 (14:22 IST)
Photo Courtesy X
ತುರುವೇಕೆರೆ: ಮಾದಕ ವ್ಯಸನ ಸೇರಿದಂತೆ ಹಲವಾರು ದುಶ್ಚಟಗಳ ದಾಸನಾಗಿದ್ದ ಮಗನನ್ನು ಸಾಯಿಸಲು ಅನುಮತಿ ಕೋರಿ ತಾಯಿಯೊಬ್ಬಳು ಠಾಣೆ ಮೆಟ್ಟಿಲೇರಿರುವ ಘಟನೆ  ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾದಕ ವ್ಯಸನಿಯಾಗಿರುವ 20 ವರ್ಷದ ಮಗನನ್ನು ಸರಿ ದಾರಿಗೆ ತರಲು ಸಾಧ್ಯವಾಗದೆ ಬೇಸತ್ತ ತಾಯಿಯೊಬ್ಬಳು ಮಗನನ್ನು ಸಾಯಿಸಲು ಅನುಮತಿ ಕೋರಿದ್ದಾಳೆ. ಮಗ ಅಭಿ ನನ್ನ ಗೌರವ ಹಾಳು ಮಾಡುತ್ತಿದ್ದಾನೆ. ಮನೆಯಲ್ಲಿ ಕಿರುಕುಳ ಕೊಡುತ್ತಿದ್ದಾನೆ. ದಯಮಾಡಿ ಆತನನ್ನು ಜೈಲಿಗೆ ಹಾಕಿ ಸರಿ ದಾರಿಗೆ ತನ್ನಿ. ಇಲ್ಲವೇ ಆತನನ್ನು ಸಾಯಿಸಲು ಅನುಮತಿ ಕೊಡಿ. ಅವನನ್ನು ಕೊಂದು, ನಾನೂ ಸಾಯುತ್ತೇನೆ ಎಂದು ಪಟ್ಟಣದ ನಿವಾಸಿ ರೇಣುಕಮ್ಮ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಸಣ್ಣದೊಂದು ಹೊಟೇಲ್ ನಡೆಸುತ್ತಿರುವ ರೇಣುಕಮ್ಮ ಮಗನನ್ನು ಪೊಲೀಸ್‌ ಠಾಣೆಗೆ ಕರೆ ತಂದಿದ್ದರು. ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದ ಮಗ ದುಶ್ಚಟಗಳ ದಾಸನಾಗಿದ್ದಾನೆ. ಆತನನ್ನು ಸರಿ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದೇನೆ. ಆದರೆ ನಾನು ಸೋತು ಹೋಗಿದ್ದೇನೆ ಎಂದು ಅವರು ಪೊಲೀಸರ ಮುಂದೆ ಕಣ್ಣೀರಿಟ್ಟಿರು.

ಅದಲ್ಲದೆ ದೂರಿನಲ್ಲಿ ತುರುವೇಕೆರೆಯಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ರಾಜಾರೋಷವಾಗಿ ಮಾರಾಟವಾಗುತ್ತಿವೆ. ಇದರಿಂದ ಅನೇಕ ಯುವಕರು ದಾರಿ ತಪ್ಪಿದ್ದಾರೆ ಎಂದರು.

ಪೊಲೀಸರು ರೇಣುಕಮ್ಮಗೆ ಸಹವಾಸ ದೋಷದಿಂದ ಹಾಳಗಿರುವ ನಿಮ್ಮ ಮಗನನ್ನು ಸರಿ ದಾರಿಗೆ ನಾವು ತರುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿನಿಂದ ರಾಜ್ಯದಲ್ಲಿ ಕೋವಿಡ್​ ಟೆಸ್ಟಿಂಗ್ ಲ್ಯಾಬ್​ಗಳು ಓಪನ್: ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸಲು ಸಲಹೆ

ಆಪರೇಷನ್ ಸಿಂಧೂರ್‌ನಿಂದ ಪಾಕ್‌ ಗಡಿಯಲ್ಲಿ ಪ್ರತಿ ಹೆಜ್ಜೆಯಿಡುವಾಗಲೂ ಯೋಚಿಸುವಂತೆ ಮಾಡಿದೆ: ಶಶಿ ತರೂರ್‌

Karnataka Weather: ವಾರದ ಮಳೆಗೆಯೇ ಸುಸ್ತಾದ ದಕ್ಷಿಣ ಕನ್ನಡ ಜನತೆ

Dehli Rain: ವಿಮಾನ ಹಾರಾಟಗಳಲ್ಲೂ ವ್ಯತ್ಯಯ ಸಾಧ್ಯತೆ, ಪ್ರಯಾಣಿಕರಿಗೆ ಹೊಸ ಸಂದೇಶ

Covid 19: ಕೋವಿಡ್‌ಗೆ ರಾಜ್ಯದಲ್ಲಿ ಮೊದಲ ಬಲಿ, ಹೆಚ್ಚಿದ ಆತಂಕ

ಮುಂದಿನ ಸುದ್ದಿ