Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಮನೆ ಮೇಲೆ ಕಲ್ಲು ತುರಾಟ ಕಾಂಗ್ರೆಸ್ ಕುಮ್ಮಕ್ಕಿದೆ : ಎ ನಾರಾಯಣಸ್ವಾಮಿ ಆರೋಪ

ಯಡಿಯೂರಪ್ಪ ಮನೆ ಮೇಲೆ ಕಲ್ಲು ತುರಾಟ ಕಾಂಗ್ರೆಸ್ ಕುಮ್ಮಕ್ಕಿದೆ : ಎ ನಾರಾಯಣಸ್ವಾಮಿ ಆರೋಪ
bangalore , ಸೋಮವಾರ, 27 ಮಾರ್ಚ್ 2023 (21:20 IST)
ಯಡಿಯೂರಪ್ಪ ನವರ ಮನೆ ಮೇಲೆ ಬಂಜಾರ ಸಮುದಾಯದ ಕಲ್ಲು ತೂರಾಟ ನಡೆದಿದೆ ಇದಕ್ಕೆ ಕಾಂಗ್ರೆಸ್ ನ ಕುಮಕ್ಕು ಇದೆ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ... ಇಂದು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಘಟನೆ ಯನ್ನು ಬಿಜೆಪಿ ಖಂಡನೆ ಮಾಡುತ್ತಿದೆ..ಈ ರೀತಿಯ ಘಟನೆ ನಿಜಕ್ಕೂ ಸರಿಯಲ್ಲ, ಬಿಜೆಪಿ ಸಾಮಾಜಿಕ ನ್ಯಾಯದಡಿ ಮೀಸಲಾತಿ‌ ಕೊಟ್ಟಿದೆ, ಆದರೆ ಯಾಕೆ ಬಿಜೆಪಿ ಮೇಲೆ ಟಾರ್ಗೆಟ್ ಮಾಡಲಾಗ್ತಿದೆ?ಕಾಂಗ್ರೆಸ್‌ನವರು ಇದ್ದಾಗ ಲಂಬಾಣಿಯವರಿಗೆ ಹಕ್ಕು ಪತ್ರ ಕೊಡಲೇ ಇಲ್ಲ.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಂದಾಯ ಮಂತ್ರಿಗಳು ಹಕ್ಕು ಪತ್ರ ಕೊಟ್ಟರು.ಅನೇಕ ಸ್ವಾಮೀಜಿಗಳ ಜತೆ ಚರ್ಚೆ ಮಾಡಿ‌ ಮೀಸಲಾತಿ ಹಂಚಿಕೆ ಮಾಡಿದ್ದೇವೆ..ಆಯೋಗದಲ್ಲಿ 3% ಹೇಳಲಾಗಿತ್ತು, ಆದ್ರೆ ನಮ್ ಸರ್ಕಾರ 4.5% ಕೊಟ್ಟಿದೆ. ಕಾಂಗ್ರೆಸ್ ನವರಿಗೆ ಮೀಸಲಾತಿ ಕಿತ್ ಹಾಕೋ ಧೈರ್ಯ ಇದೆಯಾ ಅಂತ ನಾವೂ ನೋಡ್ತೀವಿ ಡಿಕೆಶಿಗೆ ಎ ನಾರಾಯಣ ಸ್ವಾಮಿ ಸವಾಲು ಎಸೆದಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅಶೋಕ್ ಖೇಣಿಗೆ ಖೆಡ್ಡಾ ತೋಡಲು ಮುಂದಾದ ಸರ್ಕಾರ-ಎಸ್ ಟಿ ಸೋಮಶೇಖರ್