Webdunia - Bharat's app for daily news and videos

Install App

ಅನುಮಾನಸ್ಪದವಾಗಿ ನಡೆದುಕೊಂಡು ತಗ್ಲಾಕಿಕೊಂಡ ಬುರ್ಖಾ ಲೇಡಿ..!

Webdunia
ಶನಿವಾರ, 25 ಮಾರ್ಚ್ 2023 (21:08 IST)
ಮನೆಯಲ್ಲಿ ಮುದ್ದಾದ ಮಗುವನ್ನು ಮುದ್ದಾಡಿ ತಾಯಿ ಎದೆಹಾಲುಣಿಸಿ ಮಲಗಿದ್ದಳು.. ತಾಯಿಯ ಮಗ್ಗಲಲ್ಲೇ ಮಲಗಿದ್ದ 42 ದಿನಗಳ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು..   ನಿದ್ರೆಯಿಂದ ಎಚ್ಚರಗೊಡ ತಾಯಿ ಮೇರೆ ಬಚ್ಚೇ ಕಹಾ ಕಹಾ  ಎಂದು ಚೀರಾಡುತ್ತಿದ್ದಳು.ಅದೊಂದು ಪುಟ್ಟ ಓಣಿ.. ಆ ಓಣಿಯಲ್ಲಿ ಬುರ್ಖಾ ದೊಡ್ಡ ಹೆಂಗಸು ಹೋಗುತ್ತಿದ್ದಾಳೆ.. ಅರೇ ಇರಪ್ಪಾ ವಿಡಿಯೋ ಎಡಿಟರ್ ಬ್ರದರ್.. ಸರಿಯಾಗಿ ಜೂಮ್ ಹಾಕಿ ತೋರ್ಸಪ್ಪ.. ಹಂ.. ನೋಡಿ ನೋಡಿ ಸರಿಯಾಗಿ ನೋಡಿ ಆ ಲೇಡಿ ಹೆಗಲ ಮೇಲೆ ಪುಟ್ಟ ಕಂದಮ್ಮ ನನ್ನು ಎತ್ತಿಕೊಂಡು ಸಾಗ್ತಿದ್ದಾಳೆ.. ಅಂದಹಾಗೆ ಎಳೆಯ ಕಂದಮ್ಮ ನನ್ನು ಕಲಾಸಿಪಾಳ್ಯದ ದುರ್ಗಮ್ಮ ಬೀದಿಯ ಮನೆಯೊಂದರಿಂದ ಕದ್ದು ಪರಾರಿಯಾಗಿದ್ದಳು.

ತಾಯಿ ಫರ್ಹೀನ್ ಳ ಎದೆಹಾಲು ಕುಡಿದು ನೆಮ್ಮದಿಯಾಗಿ ಮಲಗಿದ್ದ ಮಗುವನ್ನು ಕದ್ದಿದ್ದು ನಂದಿನಿ ಅಲಿಯಾಸ್ ಆಯೆಷಾ.. ಕಲಾಸಿಪಾಳ್ಯದಲ್ಲಿ ಮಗುವನ್ನು ಕದ್ದು ಮಾಗಡಿರಸ್ತೆಯ ರೈಲ್ವೇ ಕ್ವಾಟ್ರಸ್ ಬಳಿ ಅನುಮಾನಸ್ಪದವಾಗಿ ತಿರುಗುತ್ತಿರುತ್ತಾಳೆ.. ಮಗು ಅಳುವಾಗ ಹಾಲುಣಿಸದೇ ಇದ್ದ ಈಕೆಯ ನಡೆ ಕಂಡು ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.. ಅಷ್ಟೇ ಹೊಯ್ಸಳ ಸಿಬ್ಬಂದಿ ಈಕೆಯನ್ನು ಕರೆದುಕೊಂಡು ಹೋಗಿ ವಿಚಾರಿಸದಾಗ ಮಗು ಕಳ್ಳತನದ ವಿಷಯ ಬಯಲಾಗಿದೆ.
 
ಇನ್ನು ಮಗುವಿನ ತಾಯಿಯ ವಿಳಾಸವನ್ನು ಪತ್ತೆಹಚ್ಚಿದ ಪೊಲೀಸರು ತಾಯಿ ಮಗುವನ್ನು ಕಳ್ಳತನದ ನಡೆದ ಕೆಲವೇ ಗಂಟೆಗಳಲ್ಲಿ ಒಂದು ಮಾಡಿದ್ದಾರೆ..ಮಗು ಕಳ್ಳತನವಾಗಿದೆ ಎಂಬುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಮಾಗಡಿ ರಸ್ತೆಯ ನಿವಾಸಿಗಳ ಶ್ರಮ ಪ್ರಮುಖವಾಗಿದೆ.. ಹಿಂದೂ ಮಹಿಳೆ ಬುರ್ಖಾ ತೊಟ್ಟು ಮಗುವಿನ ಕಳ್ಳತನ ಮಾಡಿದ್ದೇಕೆ ಎಂಬ ನಿಖರ ಮಾಹಿತಿ ಹೊರಬರಬೇಕಿದೆ.ಸದ್ಯ ಕಲಾಸಿಪಾಳ್ಳ ಪೊಲೀಸರು ನಂದಿನಿ ಅಲಿಯಾಸ್ ಆಯೆಷಾಳನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ನಂದಿನಿ ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಮಹಿಳೆ ಎನ್ನಲಾಗುತ್ತಿದ್ದು ಮಗುಕಳ್ಳತನಕ್ಕೆ ಇಳಿದಿದ್ದೇಕೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಲಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿಗಣತಿಗೆ ವಿಕಲಚೇತನರ ಬಳಕೆ: ಬಿವೈ ವಿಜಯೇಂದ್ರ ಆಕ್ಷೇಪ

ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆ ತಂದಿರುವ ಗ್ಯಾರಂಟಿ:ರಣದೀಪ ಸುರ್ಜೇವಾಲ

ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ: ಡಾ.ಅಶ್ವತ್ಥನಾರಾಯಣ್

ಮಕ್ಕಳ ಸರಣಿ ಸಾವಿನ ಹಿನ್ನಲೆ: ಕೋಲ್ಡ್ರಿಫ್ ಮಕ್ಕಳ ಸಿರಪ್ ಗೆ ಕರ್ನಾಟಕದಲ್ಲೂ ನಿಷೇಧ

ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments