Webdunia - Bharat's app for daily news and videos

Install App

ಕಷ್ಟಪಟ್ಟ ಟಿಬಿ ಡ್ಯಾಮ್ ಗೇಟ್ ಅಳವಡಿಸಿದವರಿಗೆ ರಾಜ್ಯ ಸರ್ಕಾರ ದುಡ್ಡೂ ಕೊಟ್ಟಿಲ್ಲ

Krishnaveni K
ಮಂಗಳವಾರ, 22 ಅಕ್ಟೋಬರ್ 2024 (14:29 IST)
ಬೆಂಗಳೂರು: ಇತ್ತೀಚೆಗೆ ತುಂಗ ಭದ್ರಾ ಡ್ಯಾಮ್ ಗೆ ಹೊಸ ಗೇಟ್ ಅಳವಡಿಸಿದವರಿಗೆ ರಾಜ್ಯ ಸರ್ಕಾರ ದುಡ್ಡೂ ಕೊಡದೇ ಕೈ ತೊಳೆದುಕೊಂಡಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ತುಂಗ ಭದ್ರಾ ಡ್ಯಾಮ್ ಗೇಟ್ ಹಾಳಾಗಿದ್ದರಿಂದ ಅಪಾರ ಪ್ರಮಾಣದ ನೀರು ನಷ್ಟವಾಗಿತ್ತು. ಸತತ ಒಂದು ವಾರದ ಪರಿಶ್ರಮದ ನಂತರ ಹೊಸ ಗೇಟ್ ಅಳವಡಿಸಲಾಯಿತು. ಆದರೆ ಡ್ಯಾಮ್ ಗೆ ಗೇಟ್ ನಿರ್ಮಿಸಿದ್ದ ಕನ್ನಯ್ಯ ನಾಯ್ಡು ಮತ್ತು ತಂಡ ಈಗ ಆರ್ಥಿಕ ಸಂಕಷ್ಟದಲ್ಲಿದೆ ಎಂದು ವರದಿಯಾಗಿದೆ.

ಇದರ ಬಗ್ಗೆ ಬಿಜೆಪಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಇದು ಕರ್ನಾಟಕದ ನಿರ್ನಾಮದ ಭೋಗಸ್ ಗ್ಯಾರಂಟಿ ಸರ್ಕಾರದ ದಿವಾಳಿ ಮಾಡೆಲ್. ಟಿಬಿ ಡ್ಯಾಮ್ ಗೆ ಗೇಟ್ ಅಳವಡಿಸಿದವರಿಗೆ ಕಾಸು ಕೊಡದೇ ‘ಕೈ’ ಕೊಟ್ಟಿದೆ ಕಾಂಗ್ರೆಸ್ ಸರ್ಕಾರ ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕೆ ಮಾಡಿದೆ.

ಸೋರುತ್ತಿದ್ದ ಬಹಳಷ್ಟು ಟಿಎಂಸಿ ನೀರನ್ನು ತಮ್ಮ ಜೀವವನ್ನು ಪಣಕ್ಕಿಟ್ಟು ತಡೆದ ಜಲಾಶಯ ತಜ್ಞ ಕನ್ನಯ್ಯ ಕುಮಾರ್ ತಂಡಕ್ಕೆ ರಾಜ್ಯ ಸರ್ಕಾರ ಇದುವರೆಗೆ ಬಾಕಿ ಹಣ ಪಾವತಿಸಿಲ್ಲ. ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ತುಂಗಭದ್ರಾ ಡ್ಯಾಮ್ ಗೆ ಬಾಗಿನ ಅರ್ಪಿಸಿ ಫೋಟೋ ಶೂಟ್ ಮಾಡಿಸಿಕೊಂಡ ನೀವು ಕನ್ನಯ್ಯಕುಮಾರ್ ಮತ್ತು ತಂಡಕ್ಕೆ ಬಾಕಿ ಹಣ ಪಾವತಿಸದೇ ಉಳಿಸಿಕೊಂಡಿರುವುದು ಸರ್ಕಾರ ದಿವಾಳಿಯಾಗಿದೆ ಎಂಬುದರ ಸೂಚಕವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಪ್ಪಳ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕದಡಿದರೆ ರಾಜ್ಯ ಸರಕಾರವೇ ಹೊಣೆ: ವಿಜಯೇಂದ್ರ ಎಚ್ಚರಿಕೆ

ಬಿಜೆಪಿಯಲ್ಲಿ ಅಧಿಕಾರ ಪಡೆಯಬೇಕಾದ್ರೆ ರೌಡಿ, ಇಲ್ಲದಿದ್ರೆ ರೇಪಿಸ್ಟ್‌ ಆಗಿರಬೇಕು: ಹರಿಪ್ರಸಾದ್ ವ್ಯಂಗ್ಯ

ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಭೇಟಿಯಾದ ಸಿಪಿ ರಾಧಾಕೃಷ್ಣನ್

ಅತ್ಯಾಚಾರ ಆರೋಪ: ಶಿವಸೇನಾ ಮಾಜಿ ಶಾಸಕನ ವಿರುದ್ಧ ಬೆಂಗಳೂರಿನ ಮಹಿಳೆ ದೂರು

ಬೀದಿ ನಾಯಿ ಪರ ಹೋರಾಟ ಮಾಡುವವರ ಈ ಸುದ್ದಿ ಓದಲೇ ಬೇಕು, ಇದ್ದ ಮನೆ ಮಗಳನ್ನೇ ಕಳೆದುಕೊಂಡ ಕುಟುಂಬ

ಮುಂದಿನ ಸುದ್ದಿ
Show comments