Webdunia - Bharat's app for daily news and videos

Install App

ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿನ ಮಳಿಗೆಗಳಿಗೆ ರಿಯಾತಿ..!!!

Webdunia
ಸೋಮವಾರ, 25 ಅಕ್ಟೋಬರ್ 2021 (19:14 IST)

ಈ ಕುರಿತಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಮಾಹಿತಿ ನೀಡಿದ್ದು, 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನದ ಸಂದರ್ಭದಲ್ಲಿ ದಿನಾಂಕ: 29-10-2021 ರಿಂದ 02-11-2021ರವರೆಗೆ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮಹೋತ್ಸವ, ಸಾಂಪ್ರದಾಯಿಕ ಉಡುಗೆ ತೊಡಿಗೆ, ದೇಸೀಯ ಆಹಾರ ಮೇಳ, ಚಿತ್ರಕಲೆ / ಶಿಲ್ಪಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ, ಬೆಂಗಳೂರು -ಇಲ್ಲಿ ಆಯೋಜಿಸಲಾಗಿದೆ.

ಪ್ರತೀ ದಿನದ ಮಳಿಗೆ ಬಾಡಿಗೆಯನ್ನು ರೂ.1000-00ಗಳು ಎಂದು ನಿಗದಿ ಮಾಡಲಾಗಿತ್ತು. ಇಂದು ನಡೆದ ಈ ಸಂಬಂಧದ ಉಪ ಸಮಿತಿ ಸಭೆಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಮಳಿಗೆ ಬಾಡಿಗೆಯನ್ನು ದಿನಕ್ಕೆ ರೂ.500-00ಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಯಿತು. ಪ್ರಕಾಶಕರು ಠೇವಣಿಯಾಗಿ ರೂ.2,500-00ಗಳ ಡಿ.ಡಿ. ಹಾಗೂ ಬಾಡಿಗೆ ಬಾಬ್ತು ರೂ.2,500-00ಗಳ ಡಿ.ಡಿ ಹೀಗೆ ಎರಡು ಪ್ರತ್ಯೇಕ ಡಿ.ಡಿ.ಯನ್ನು ಸಲ್ಲಿಸಬೇಕು. ಮಹೋತ್ಸವ ಮುಗಿದ ನಂತರ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದು. ಪುಸ್ತಕ ಪ್ರಕಾಶಕರು / ಮಾರಾಟಗಾರರು ಕನಿಷ್ಟ 20% ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕೆಂದು ಸಮಿತಿ ತೀರ್ಮಾನಿಸಿತು ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments