Select Your Language

Notifications

webdunia
webdunia
webdunia
webdunia

ದಲಿತ ಸಿದ್ಧಾಂತ ಗಾಳಿಗೆ ತೂರಿದ ಶ್ರೀನಿವಾಸ್ ಪ್ರಸಾದ್: ಎಚ್.ವಿಶ್ವನಾಥ್

ದಲಿತ ಸಿದ್ಧಾಂತ ಗಾಳಿಗೆ ತೂರಿದ ಶ್ರೀನಿವಾಸ್ ಪ್ರಸಾದ್: ಎಚ್.ವಿಶ್ವನಾಥ್
ಮೈಸೂರು , ಭಾನುವಾರ, 25 ಡಿಸೆಂಬರ್ 2016 (11:37 IST)
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿರುವುದು ಬೇಸರ ತಂದಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‌ಗಾಗಿ ಪಕ್ಷ ಅಂತ್ಯವಾಗುವುದಿಲ್ಲ. ಹಾಗೂ ಅವರು ಪಕ್ಷ ಬದಲಿಸಿರುವುದು ನನಗೆ ಆಶ್ಚರ್ಯ ತಂದಿಲ್ಲ ಎಂದು ಅಭಿಪ್ರಾಯಪಟ್ಟರು.
 
ರಾಜ್ಯ ಸಚಿವ ಸಂಪುಟದಿಂದ ಸ್ಥಾನ ಕಳೆದುಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಪ್ರಸಾದ್ ಅವರು   ಅ.17 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡೆದ್ದು ಕಾಂಗ್ರೆಸ್ ಪಕ್ಷದಿಂದ ಹೊರ ಬಂದಿದ್ದ ಪ್ರಸಾದ್ ಜನವರಿ 2 ರಂದು  ಬಿಜೆಪಿ ಪಕ್ಷ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಕಿ ಗ್ರಾಹಕ್ ಯೋಜನೆ ಇಂದು (ಡಿ.25) ಪ್ರಾರಂಭ