Select Your Language

Notifications

webdunia
webdunia
webdunia
webdunia

ರಾಜಕೀಯ ಆರಂಭದಲ್ಲಿ ಸಿಎಂ ಬಳಿ ಏನಿತ್ತು?; ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಶ್ರೀನಿವಾಸ್ ಪ್ರಸಾದ್
ಮೈಸೂರು , ಭಾನುವಾರ, 19 ಜೂನ್ 2016 (13:17 IST)
ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜಕೀಯ ಜೀವನದಲ್ಲಿ ನೆರವು ನೀಡಿದ್ದ  ನನಗೆ ಸಚಿವ ಸಂಪುಟದಿಂದ ಕೈಬಿಟ್ಟಿದ್ದಾರೆ ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
 
ರಾಜಕೀಯ ಆರಂಭದ ದಿನಗಳಲ್ಲಿ ಜನಬೆಬಂಲವು ಇರಲಿಲ್ಲ. ಮೂರು ಕಾಸು ಇರಲಿಲ್ಲ. ಒಂದು ಹಂತದಲ್ಲಿ ಚುನಾವಣೆಗೆ ನಿಲ್ಲುವುದಿಲ್ಲವೆಂದಿಂದ ಅವರನ್ನು ನಾನೇ ಮನವೊಲಿಸಿ ಚುನಾವಣೆಗೆ ನಿಲ್ಲುವಂತೆ ಮಾಡಿದ್ದೆ. ನಾನು ಮಾಡಿರುವುದು ತಪ್ಪು ಎಂದು ಈಗ ನನಗನ್ನಿಸುತ್ತಿದೆ ಎಂದು ಹೇಳಿದರು.
 
ಸಂಪುಟ ಪುನಾರಚನೆಯಲ್ಲಿ ನನ್ನನ್ನು ಕೈಬಿಡುತ್ತಾರೆ ಎಂದು ನಾನು ಭಾವಿಸಿಯೇ ಇರಲಿಲ್ಲ. ಯಾಕೆಂದರೆ ಕಂದಾಯ ಸಚಿವನಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ಯಾವುದೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿಲ್ಲ. ಯಾರನ್ನು ಟೀಕಿಸಿಲ್ಲ. ಯಾವ ಕಾರಣಕ್ಕೆ ನನ್ನನ್ನು ಕೈಬಿಡಲಾಗಿದೆ ಎನ್ನುವುದೇ ನನಗೆ ಗೊತ್ತಿಲ್ಲ ಎಂದರು.
 
ನನ್ನನ್ನು ಮಂತ್ರಿಯಾಗಿ ಎಂದು ದೇವೇಗೌಡರು ಆಹ್ವಾನಿಸಿದ್ದರು. ಸಿದ್ದರಾಮಯ್ಯನವರ ಸ್ಥಾನವನ್ನು ತುಂಬಿ ಎಂದು ಮನವಿ ಮಾಡಿದ್ದರು. ಸಚಿವ ಮಹಾದೇವ ಪ್ರಸಾದ್ ನೇರನಾಗಿ ದೇವೇಗೌಡರೊಂದಿಗೆ ನನ್ನನ್ನು ಮಾತನಾಡಿಸಿದ್ದರು. ಆದರೂ ನಾನು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಲವೊಮ್ಮೆ ಅನರ್ಹರು, ಅಯೋಗ್ಯರು ಮಂತ್ರಿಗಳಾಗ್ತಾರೆ: ಕೆ.ಬಿ.ಕೋಳಿವಾಡ್