Select Your Language

Notifications

webdunia
webdunia
webdunia
webdunia

ಕ್ಷಣಕ್ಕೊಂದು ಮಾತನಾಡುವ ಸುಭಾಷ್ ರಾಠೋಡ ಅವಕಾಶವಾದಿ ರಾಜಕಾರಣಿ-ಉಮೇಶ್ ಜಾಧವ್ ಕಿಡಿ

ಕ್ಷಣಕ್ಕೊಂದು ಮಾತನಾಡುವ ಸುಭಾಷ್ ರಾಠೋಡ ಅವಕಾಶವಾದಿ ರಾಜಕಾರಣಿ-ಉಮೇಶ್ ಜಾಧವ್ ಕಿಡಿ
ಕಲಬುರಗಿ , ಶನಿವಾರ, 30 ಮಾರ್ಚ್ 2019 (13:49 IST)
ಕಲಬುರಗಿ : ಕ್ಷಣಕ್ಕೊಂದು ಮಾತನಾಡುವ ಸುಭಾಷ್ ರಾಠೋಡ ಅವಕಾಶವಾದಿ ರಾಜಕಾರಣಿ ಎಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಿಡಿಕಾರಿದ್ದಾರೆ.


ಸುಭಾಷ್ ರಾಠೋಡ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವುದಾಗಿ ಹೇಳಿದ್ದರು. ಆದರೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸುಭಾಷ್ ರಾಠೋಡ ಇದೀಗ ಖರ್ಗೆ ಪರವಾಗಿ ಮಾತನಾಡುತ್ತಿದ್ದಾರೆ.


ಈ ಬಗ್ಗೆ ಮಾತನಾಡಿದ ಉಮೇಶ್ ಜಾಧವ್, ಮೊನ್ನೆಯವರೆಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುತ್ತೇನೆ, ನನಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದ ಸುಭಾಷ್ ರಾಠೋಡ, ನಿನ್ನೆ ಖರ್ಗೆ ಅವರನ್ನು ಸೋಲಿಸಲು ಭೂಮಿಯ ಮೇಲೆ ಯಾರಿಂದಲೂ ಸಾಧ್ಯವಿಲ್ಲ ಎನ್ನತ್ತಾರೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಸೇರಿ ಖರ್ಗೆ ಮೆಚ್ಚಿಸಲು ಯತ್ನಿಸುತ್ತಿದ್ದಾರೆ. ಇವರೊಬ್ಬ ಅವಕಾಶವಾದಿ ರಾಜಕಾರಣಿ ಎಂದು ವ್ಯಂಗ್ಯ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಸರು ಗದ್ದೆಯಲ್ಲಿ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ