Webdunia - Bharat's app for daily news and videos

Install App

ಶಾಸಕರು ಹೇಳಿದ್ದೇ ಹೇಳಿದರೆ ಸಾಯಬೇಕಾಗುತ್ತೆ ಎಂದ ಸ್ಪೀಕರ್

Webdunia
ಸೋಮವಾರ, 22 ಜುಲೈ 2019 (18:24 IST)
ಮೈತ್ರಿ ಸರಕಾರದ ವಿಶ್ವಾಸ ಮತ ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಪದೇ ಪದೇ ಗರಂ ಆಗಿರೋ ಘಟನೆ ನಡೆದಿದೆ.

ಕಳೆದೆರಡು ದಿನಗಳಿಂದ ಆಡಳಿತ ಪಕ್ಷಗಳ ಸದಸ್ಯರು, ಪಕ್ಷಾಂತರ ನಿಷೇಧ ಕಾಯ್ದೆ, ಶೆಡ್ಯುಲ್ 10 ಹಾಗೂ ವಿಪಕ್ಷ ವಿರುದ್ಧ ಕಿಡಿಕಾರುತ್ತಿದ್ದಾರೆ.

ಈ ನಡುವೆ ಈಶ್ವರ ಖಂಡ್ರೆ ಸದನದಲ್ಲಿ ಮಾತನಾಡುತ್ತಿರುವಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಸ್ಪೀಕರ್ ಪ್ರವೇಶಿಸಿ, ಹೇಳಿದ್ದನ್ನೇ ಯಾರೂ ಮತ್ತೆ ಪ್ರಸ್ತಾಪಿಸಬೇಡಿ. ಹೊಸ ಹಾಡು ಹೇಳಿದ್ರೆ ನಾವೂ ಕೇಳಬಹುದು ಎಂದ್ರು.

ನಿಮ್ಮಲ್ಲಿ ಯಾರು? ಎಷ್ಟು ಸಲ ಲೈಬ್ರರಿಗೆ ಹೋಗುತ್ತೀರಾ? ಲೈಬ್ರರಿಯಿಂದ ಹಾಜರಿ ಬುಕ್ ತರಿಸಲಾ? ಲೈಬ್ರರಿಗೆ ಹೋಗದೇ ಹೊಸ ವಿಷಯ ತಿಳಿದುಕೊಳ್ಳದೇ ಹೇಳಿದ್ದನ್ನೆ ಹೇಳಬೇಡಿ ಎಂದ್ರು. ಹೇಳಿದ್ದನ್ನೇ ಹೇಳಿದ್ರೆ ನಾವು ಸಾಯಬೇಕಾಗುತ್ತೆ ಎಂದ್ರು.

ಬೇರೆ ಶಾಸಕರು ಮಾಡಿರೋ ಪ್ರಸ್ತಾಪಿತ ವಿಷಯ ಬಿಟ್ಟು ಬೇರೆ ಮಾತಾಡಿ, ಹೊಸ ಶಾಸಕರಿಗೆ ಮಾತನಾಡೋಕೆ ಅವಕಾಶ ನೀಡಬೇಕಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವಿಚಕ್ರ ವಾಹನ ಸವಾರರಿಗೆ ಯೋಗಿ ಸರ್ಕಾರ ಶಾಕ್‌: ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಸಿಗಲ್ಲ

ಹೈಕಮಾಂಡ್‌ ಮೆಚ್ಚಿಸಲು ಡಿಕೆ ಶಿವಕುಮಾರ್‌ ಹೀಗೇ ನಡೆದುಕೊಳ್ಳುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

ಭೀಕರ ಪ್ರವಾಹಕ್ಕೆ ತುತ್ತಾದ ಜಮ್ಮು ಪ್ರದೇಶದಿಂದ 5000 ಸಾವಿರ ಮಂದಿ ಸ್ಥಳಾಂತರ

ಎಸ್‌ಐಟಿ ಶೋಧದ ವೇಳೆ ಮಹೇಶ್ ಶೆಟ್ಟಿ ಮನೆಯಲ್ಲಿ ಸಿಕ್ತು ಊಹಿಸಲಾಗದ ವಸ್ತು

ಮುಂದಿನ ಸುದ್ದಿ
Show comments