Select Your Language

Notifications

webdunia
webdunia
webdunia
webdunia

ಅನುದಾನ ಕೊಡದೇ ಅಭಿವೃದ್ಧಿ ಹೇಗೆ? ಸಭಾಪತಿ ಮುಂದೆ ಶಾಸಕರ ಅಳಲು

ಅನುದಾನ ಕೊಡದೇ ಅಭಿವೃದ್ಧಿ ಹೇಗೆ? ಸಭಾಪತಿ ಮುಂದೆ ಶಾಸಕರ ಅಳಲು
bangalore , ಮಂಗಳವಾರ, 3 ಆಗಸ್ಟ್ 2021 (19:52 IST)
ಅನುದಾನ ನೀಡದೇ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಹೇಗೆ ಎಂದು ಶಾಸಕರು ಸರ್ಕಾರದ ಅನುದಾನ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ವಿಚಾರವಾಗಿ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆಯಲ್ಲಿ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಹೊರಟ್ಟಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳೋದಾದ್ರೆ ಜಿಲ್ಲಾಧಿಕಾರಿಗಳು ಕಿರುಕುಳ ಕೊಡುತ್ತಾರೆ ಎಂದರು.
ಜಿಲ್ಲಾಧಿಕಾರಿಗಳು ಅನುದಾನ ಹಂಚಿಕೆಯಲ್ಲಿ ಅಡ್ಡ ಬರ್ತಾರೆ ಎಂಬ ಆರೋಪ ಬರುತ್ತಾ ಇದೆ. ಪ್ರತಿವರ್ಷ 700 ಕೋಟಿ ಬಜೆಟ್ ನಲ್ಲಿ ಮೀಸಲಿಡಲಾಗುತ್ತೆ. ಆದರೂ ಈ ರೀತಿ ಸಮಸ್ಯೆಗಳಾಗೋದ್ರಿಂದ ಈಗಾಗಲೇ ಎಲ್ಲಾ ಶಾಸಕರು ಸಲಹೆಗಳನ್ನು ನೀಡಿದ್ದಾರೆ. ಹಾಗಾಗಿ ಇನ್ನೊಂದು ಸಾರಿ ಸಭೆ ಕರೆದು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಆಗಸ್ಟ 14 ರೊಳಗೆ ಅನುದಾನ ಬಿಡುಗಡೆ ಮಾಡಿಸೋಕೆ ಪ್ರಯತ್ನ ಮಾಡ್ತೀನಿ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ಪಿಯಿಂದ ಯಾರೇ ಹೊರ ಹೋದರೂ ಕಸ, ಕಸದ ಬುಟ್ಟಿ ಸೇರಿದಂತೆ