Select Your Language

Notifications

webdunia
webdunia
webdunia
webdunia

ಸದ್ಯದಲ್ಲಿಯೇ ರಾಹುಲ್ ಗಾಂಧಿ ಮನೆಯಲ್ಲಿ ಭೂಕಂಪವಾಗಲಿದೆ: ಬಿಎಸ್‌ವೈ

ಸದ್ಯದಲ್ಲಿಯೇ ರಾಹುಲ್ ಗಾಂಧಿ ಮನೆಯಲ್ಲಿ ಭೂಕಂಪವಾಗಲಿದೆ: ಬಿಎಸ್‌ವೈ
ಮೈಸೂರು , ಮಂಗಳವಾರ, 20 ಡಿಸೆಂಬರ್ 2016 (11:47 IST)
ಸದ್ಯದಲ್ಲಿಯೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮನೆಯಲ್ಲಿ ಭೂಕಂಪವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾರ್ಮಿಕವಾಗಿ ನುಡಿದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ನಾನು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಮನೆಯಲ್ಲಿ ಸದ್ಯದಲ್ಲಿಯೇ ಭೂಕಂಪವಾಗುತ್ತದೆ. ಅದು ಯಾವ ಭೂಕಂಪ ಎಂದು ಸದ್ಯದಲ್ಲಿಯೇ ಗೊತ್ತಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
 
ನಂಜನಗೂಡ ಉಪಚುನಾವಣೆವಲ್ಲಿ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಸ್ಪರ್ಧಿಸಲ್ಲ. ಅದು ಯಾಕೆ, ಏನು ಎಂದು ಮುಂದೆ ತಿಳಿಯಲಿದೆ ಎಂದು ಕೂತುಹಲದ ಹೇಳಿಕೆ ನೀಡಿದ್ದಾರೆ.
 
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಖಚಿತ. ನಂಜನಗೂಡ ಉಪಚುನಾವಣೆವಲ್ಲಿ ಬಿಜೆಪಿ ಜಯಭೇರಿಯಾಗವುದು ಖಚಿತ ಎಂದು ಹೇಳಿದರು.
 
ಸದ್ಯದಲ್ಲಿಯೇ ರಾಜ್ಯ ಸರಕಾರದ ಎಂಎಲ್‌ಸಿ ಹಾಗೂ ಸಚಿವರ ಬಣ್ಣ ಬಯಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಪುರಾ ವಿಧಾನಸಭೆಯಲ್ಲಿ ಶಾಸಕನ ಹುಚ್ಚಾಟ