Publish Date: Sat, 11 Jan 2020 (07:18 IST)
Updated Date: Sat, 11 Jan 2020 (07:20 IST)
ನವದೆಹಲಿ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೀಪಿಕಾ ತಮ್ಮ ರಾಜಕೀಯ ಸಿದ್ದಾಂತ ಏನೆಂಬುದನ್ನು ಹೇಳಬೇಕು. ಅವರು ಅಲ್ಲಿಗೆ ಏಕೆ ಹೋಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ದೀಪಿಕಾ ಕಾಂಗ್ರೆಸ್ ಜೊತೆ ಸಂಬಂಧ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ 2011ರಲ್ಲಿ ಹೇಳಿದ್ದರು. ಇದರ ಬಗ್ಗೆ ಹಲವರಿಗೆ ತಿಳಿದಿಲ್ಲ.ಈಗ ಇದು ಅಭಿಮಾನಿಗಳಿಗೆ ತಿಳಿದು ಅವರು ಶಾಕ್ ಆಗಿದ್ದಾರೆ ಎಂದು ದೀಪಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.