Select Your Language

Notifications

webdunia
webdunia
webdunia
webdunia

ಅಮಿತ್ ಶಾ ಭೇಟಿ ಮಾಡುತ್ತಾರಾ ಎಸ್.ಎಂ. ಕೃಷ್ಣ..?

ಅಮಿತ್ ಶಾ ಭೇಟಿ ಮಾಡುತ್ತಾರಾ ಎಸ್.ಎಂ. ಕೃಷ್ಣ..?
Bengaluru , ಮಂಗಳವಾರ, 7 ಮಾರ್ಚ್ 2017 (14:08 IST)
ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಒಂದು ಹೆಜ್ಜೆ ಹೊರಗಿಟ್ಟಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆಗೆ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ. ಸದ್ಯದಲ್ಲೇ ಎಸ್.ಎಂ.ಕೃಷ್ಣ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಮಾರ್ಚ್ 17ರ ಬಳಿಕ ಕೃಷ್ಣ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದ್ದರೂ ಬಿಜೆಪಿ ವರಿಷ್ಠರ ಭೇಟಿ ಬಳಿಕ ಸಮಯ ನಿಗದಿಯಾಗಲಿದೆ. ಬಿಜೆಪಿ ಸೇರ್ಪಡೆ ಬಳಿಕ ಒಂದು ಸಮಾವೇಶ ನಡೆಸಿ ತಮ್ಮ ಬೆಂಬಲಿಗರನ್ನೂ ಬಿಜೆಪಿಗೆ ಸೆಳೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.  ಹಾಗೇನಾದರೂ ಆದಲ್ಲಿ ಹಳೇಮೈಸೂರು ಭಾಗದ ಮಂಡ್ಯ, ಮದ್ದೂರು ಸುತ್ತಮುತ್ತ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಹೆಚ್ಚಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನಿನ್ನೆ ತಾನೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಆರ್. ಅಶೋಕ್ ಸದಾಶಿವನಗರದ ಎಸ್.ಎಂ. ಕೃಷ್ಣ ಮನೆಗೆ ತೆರಳಿ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಸಮುದ್ರದಲ್ಲಿ ಸಿಕ್ಕಿತು ರಹಸ್ಯಮಯ ಜೀವಿ