Select Your Language

Notifications

webdunia
webdunia
webdunia
webdunia

ವಿಜಯಪುರದ ಡ್ಯಾಂ ಮೇಲೆ ವಿಮಾನ ಹಾರಾಟ: ಆತಂಕಗೊಂಡ ಜನತೆ

ವಿಜಯಪುರದ ಡ್ಯಾಂ ಮೇಲೆ ವಿಮಾನ ಹಾರಾಟ: ಆತಂಕಗೊಂಡ ಜನತೆ
ವಿಜಯಪುರ , ಗುರುವಾರ, 23 ಮಾರ್ಚ್ 2017 (14:05 IST)
ಆಲಮಟ್ಟಿ ಡ್ಯಾಂ ಮೇಲೆ ಸಣ್ಣ ಗಾತ್ರದ ವಿಮಾನ ಹಾರಾಡುತ್ತಿರುವುದನ್ನು ನೋಡಿದ ಜನತೆ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ರಾಮಪ್ಪ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೀದರ್ ವಾಯುಸೇನಾ ನೆಲೆಯ ತರಬೇತಿಯ ವಿಮಾನ ಇದಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
 
ಬೀದರ್ ವಾಯುಸೇನೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದಾಗ ವಾಯುಸೇನೆ ವಿಮಾನ ಹಾರಾಟ ನಡೆಸುತ್ತಿದೆ ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ರಾಮಪ್ಪ ವಿವರಣೆ ನೀಡಿದ್ದಾರೆ.
 
ಇಂದು ಬೆಳಿಗ್ಗೆ ಆಲಮಟ್ಟಿ ಡ್ಯಾಂ ಮೇಲೆ ಸಣ್ಣಗಾತ್ರದ ವಿಮಾನ ಹಾರಾಡುತ್ತಿರುವುದನ್ನು ನೋಡಿದ ಸ್ಥಳೀಯರು ಇದೊಂದು ಉಗ್ರ ಕೃತ್ಯವೋ, ಉಗ್ರರು ಡ್ಯಾಂ ಮೇಲೆ ದಾಳಿ ಮಾಡುತ್ತಿದ್ದಾರೆಯೇ ಎನ್ನುವ ಆತಂಕ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಪಿ.ನಾಗರಾಜು ಸ್ಪಷ್ಟನೆ