Select Your Language

Notifications

webdunia
webdunia
webdunia
webdunia

ಸ್ಕೈಬಾರ್‌ನಲ್ಲಿ ದಾಂಧಲೆ: ಕಾಂಗ್ರೆಸ್ ಶಾಸಕ ವಿಜಯಾನಂದ್ ವಿರುದ್ಧ ವಾರೆಂಟ್

ಸ್ಕೈಬಾರ್‌ನಲ್ಲಿ ದಾಂಧಲೆ: ಕಾಂಗ್ರೆಸ್ ಶಾಸಕ ವಿಜಯಾನಂದ್ ವಿರುದ್ಧ ವಾರೆಂಟ್
ಹುನಗುಂದ , ಗುರುವಾರ, 29 ಡಿಸೆಂಬರ್ 2016 (15:51 IST)
ಎರಡು ವರ್ಷಗಳ ಹಿಂದೆ ಯುಬಿ ಸಿಟಿಯ ಸ್ಕೈಬಾರಿನಲ್ಲಿ ನಡೆದ ಹಲ್ಲೆ, ದಾಂಧಲೆ ಹಾಗೂ ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಜಯಾನಂದ ಕಾಶಪ್ಪನವರ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಸಿಸಿಬಿ ಪೊಲೀಸರು ಚಾರ್ಚ್‌ಶೀಟ್ ಹಾಕಿದ್ದು, ವಿಜಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಸಮನ್ಸ್‌ಗೆ ಉತ್ತರ ನೀಡದ ಕಾರಣ ವಾರೆಂಟ್ ಜಾರಿಗೊಳಿಸಲಾಗಿದೆ. 
 
2014ರ ಜುಲೈ 1ರಂದು ಕಬ್ಬನ ಪಾರ್ಕ್ ಠಾಣೆಯ ಇಬ್ಬರು ಪೊಲೀಸರ ಮೇಲೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಅವರ ಬಲಗೈ ಬಂಟ ರೌಡಿ ಶೀಟರ್ ಸೋಮಶೇಖರ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೇನಾಮಿ ಆಸ್ತಿ ಪ್ರಕರಣ: ಕೋರ್ಟ್‌ನಿಂದ ಯಡಿಯೂರಪ್ಪ, ಈಶ್ವರಪ್ಪಗೆ ಬಿಗ್ ರಿಲೀಫ್