Select Your Language

Notifications

webdunia
webdunia
webdunia
webdunia

ಕೊರೋನಾ ಪೀಡಿತ ರಮೇಶ್ ಜಾರಕಿಹೊಳಿ ವಿಚಾರಿಸಲು ಬಂದ ಎಸ್ ಐಟಿ ತಂಡ

ಕೊರೋನಾ ಪೀಡಿತ ರಮೇಶ್ ಜಾರಕಿಹೊಳಿ ವಿಚಾರಿಸಲು ಬಂದ ಎಸ್ ಐಟಿ ತಂಡ
ಬೆಳಗಾವಿ , ಬುಧವಾರ, 7 ಏಪ್ರಿಲ್ 2021 (09:39 IST)
ಬೆಳಗಾವಿ: ಸಿಡಿ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಈಗ ಕೊರೋನಾ ಪೀಡಿತರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಇದರ ಸತ್ಯಾಸತ್ಯತೆ ತಿಳಿಯಲು ಸ್ವತಃ ಎಸ್ ಐಟಿ ತಂಡ ಆಸ್ಪತ್ರೆಗೆ ಭೇಟಿ ನೀಡಿದೆ.

 

ಜಾರಕಿಹೊಳಿಗೆ ಕೊರೋನಾ ತಗುಲಿರುವುದು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಒಂದು ನೆಪ ಎಂದು ಕಾಂಗ್ರೆಸ್ ಟೀಕೆ ಮಾಡಿತ್ತು. ಇದರ ಬೆನ್ನಲ್ಲೇ ಗೋಕಾಕ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್ ಜಾರಕಿಹೊಳಿಯವರನ್ನು ಎಸ್ ಐಟಿ ತಂಡ ಭೇಟಿ ಮಾಡಿ ಅವರ ಕೊರೋನಾ ವರದಿಯನ್ನು ಪರಿಶೀಲಿಸಿದೆ.

ಸೋಮವಾರ ವಿಚಾರಣೆಗೆ ಹಾಜರಾಗಲು ರಮೇಶ್ ಜಾರಕಿಹೊಳಿಗೆ ಸೂಚಿಸಲಾಗಿತ್ತು. ಆದರೆ ಅನಾರೋಗ್ಯ ನೆಪವೊಡ್ಡಿ ಅವರು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಬಂದ್ ಬಿಸಿ: ಬಸ್ ಇಲ್ಲದೇ ಪ್ರಯಾಣಿಕರ ಪರದಾಟ