Select Your Language

Notifications

webdunia
webdunia
webdunia
webdunia

‘ಸಿದ್ದು ದಾಖಲೆಯನ್ನ ಬಿಡುಗಡೆ ಮಾಡ್ಲಿ’

‘ಸಿದ್ದು ದಾಖಲೆಯನ್ನ ಬಿಡುಗಡೆ ಮಾಡ್ಲಿ’
bangalore , ಬುಧವಾರ, 28 ಸೆಪ್ಟಂಬರ್ 2022 (20:58 IST)
ಸಿದ್ದರಾಮೋತ್ಸವಕ್ಕೆ 75 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅಷ್ಟೊಂದು ಹಣ ಸಿದ್ದರಾಮಣ್ಣ ಅವರಿಗೆ ಎಲ್ಲಿಂದ ಬಂತು ಎಂದು BJP ರಾಜ್ಯಾಧ್ಯಕ್ಷ  ನಳೀನ್​​ ಕುಮಾರ್​​​ ಕಟೀಲ್​​ ಪ್ರಶ್ನಿಸಿದ್ದಾರೆ. ಅವರ ಇತಿಹಾಸ ನೋಡಿ, ಸಿದ್ದರಾಮಯ್ಯ ಶ್ರೀಮಂತ ಕುಟುಂಬದಿಂದ ಬಂದಿಲ್ಲ. ಆದರೂ ಅಷ್ಟೊಂದು ಹಣ ಖರ್ಚು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್​​​ ವಾಗ್ದಾಳಿ ನಡೆಸಿದ್ರು. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, BJP ಸರ್ಕಾರ ಭ್ರಷ್ಟಾಚಾರ ಮಾಡಿದೆ ಅಂತ ಹೇಳುತ್ತಾರೆ. ಕಾಂಗ್ರೆಸ್​​​ನವರ ಬಳಿ ಯಾವ ದಾಖಲೆಗಳು ಇವೆ. ಸಿದ್ದರಾಮಯ್ಯ ಹತ್ತಿರ ದಾಖಲೆ ಇದ್ರೆ ಬಿಡುಗಡೆ ಮಾಡ್ಲಿ ಎಂದು ಕಟೀಲ್​​ ಸವಾಲೆಸೆದ್ರು. ಕೊರೋನಾ ಲಸಿಕೆಯಲ್ಲಿ ದೇಶ ಕ್ರಾಂತಿ ಮಾಡಿದೆ. ಆದರೆ ಕಾಂಗ್ರೆಸ್ ಕೊರೋನಾ ಲಸಿಕೆಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮೂವರು ಭಯೋತ್ಪಾದಕರ ಹತ್ಯೆ