Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸರಕಾರ ಲೂಟಿಕೋರರ ಪರವಾಗಿದೆ: ಎಚ್‌.ಡಿ. ಕುಮಾರಸ್ವಾಮಿ

ಸಿದ್ದರಾಮಯ್ಯ ಸರಕಾರ ಲೂಟಿಕೋರರ ಪರವಾಗಿದೆ: ಎಚ್‌.ಡಿ. ಕುಮಾರಸ್ವಾಮಿ
ಮೈಸೂರು , ಸೋಮವಾರ, 23 ಮೇ 2016 (18:56 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ದಲಿತರ ಪರವಾಗಿಯೂ ಇಲ್ಲ, ಅಹಿಂದದ ಪರವಾಗಿಯೂ ಇಲ್ಲ, ಅವರ ಸರಕಾರ ಲೂಟಿಕೋರರ ಪರವಾಗಿದೆ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ಮೇ 17 ರಂದು ಮುಖ್ಯಮಂತ್ರಿಯವರ ಜನತಾ ದರ್ಶನ ಕಾರ್ಯಕ್ರಮಕ್ಕೆ ದಲಿತ ಮಹಿಳೆ ಒಬ್ಬರು ತಮ್ಮ ಪುಟ್ಟ ಕಂದಮನ ಜೊತೆ ಆಗಮಿಸಿದ್ದರು. ಆದರೆ, ರಾಜ್ಯ ಸರಕಾರದ ಅಧಿಕಾರಿಗಳು ಆ ದಲಿತ ಮಹಿಳೆಯನ್ನು ಮಹಿಳಾ ನಿಲಯದಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ. ಜೊತೆಗೆ ನೀನು ವ್ಯೆಶ್ಯಾವಾಟಿಕೆ ಮಾಡುತ್ತಿದ್ದೀಯಾ ಎಂದು ಆರೋಪಿಸಿ ಬೆತ್ತಲೆ ಮಾಡಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ರಾಜ್ಯ ಸರಾಕಾರದ ಕಾರ್ಯವೈಖರಿಯ ಕುರಿತು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
 
ಇನ್ನೂ ಆ ನೊಂದ ಮಹಿಳೆಯನ್ನು ನಾನೇ ವಿಧಾನಸಭೆಗೆ ಕರೆತರುತ್ತೇನೆ ಮಾಧ್ಯಮದ ಮುಂದೆ ಹೇಳಿಕೆ ಕೊಡಿಸುತ್ತೇನೆ. ಸತ್ಯಾನು ಸತ್ಯತೆಗಳನ್ನು ಬಯಲಿಗೆಳೆಯುತ್ತೇನೆ. ನೊಂದ ದಲಿತ ಮಹಿಳೆಗೆ ನ್ಯಾಯ ಸೀಗಬೇಕಾಗಿದೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲ ವಜೂಭಾಯಿ ವಾಲಾ ಕಾರ್ಯವೈಖರಿಯ ಬಗ್ಗೆ ತನಿಖೆಯಾಗಲಿ: ಕುಮಾರಸ್ವಾಮಿ