Webdunia - Bharat's app for daily news and videos

Install App

ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲೂ ಜನ ನಾಮ ಹಾಕ್ತಾರೆ

Webdunia
ಶನಿವಾರ, 29 ಜೂನ್ 2019 (17:29 IST)
ಮೈತ್ರಿ ಸರಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಟೀಕೆಗಳು ಕೇಳಿಬರಲಾರಂಭಿಸಿವೆ. ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿಯೂ ಜನರು ನಾಮ ಹಾಕ್ತಾರೆ. ಹೀಗಂತ ಮಾಜಿ ಡಿಸಿಎಂ ಹೇಳಿದ್ದಾರೆ.

ಮೈತ್ರಿ‌ ಪಕ್ಷಗಳ ನಾಯಕರ ವಿರುದ್ಧ ಬಿಜೆಪಿ ಶಾಸಕ, ಮಾಜಿ ಡಿಸಿಎಂ ಆರ್. ಅಶೋಕ್ ಟೀಕೆ ಮಾಡಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ ನಾಯಕರು ದೇವಸ್ಥಾನಗಳನ್ನು ಸುತ್ತಿದ್ರು. ಹೆಚ್.ಡಿ.ರೇವಣ್ಣ ನಿಂಬೆಹಣ್ಣು ಹಿಡಿದು ಓಡಾಡ್ತಿದ್ರು. ಹಾಸನದಲ್ಲಿ ರೇವಣ್ಣ ಅವರ ತೆಂಗಿನಕಾಯಿ ಒಡೆಯಲಿಲ್ಲ. ಜೆಡಿಎಸ್ ಗೆ ಕೊನೆಗೆ ದೇವರೂ ಕೈ ಬಿಟ್ಟ. ಜೆಡಿಎಸ್ ನಲ್ಲಿ‌ ಒಬ್ಬರೇ ಸಂಸದ ಗೆದ್ದಿರೋದು. ಹಾಗಾಗಿ ಕುಮಾರಸ್ವಾಮಿ ಈಗ ಒಬ್ಬಂಟಿ ಆಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಗೂ ನಾಮ ಹಾಕಿದಾರೆ. ಕಾಂಗ್ರೆಸ್ ನಲ್ಲೂ ಒಬ್ಬರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಗೂ ಒಂದು ನಾಮ ಹಾಕಿದಾರೆ ಜನರು. ಮುಂದಿನ ಸಲವೂ ಸಿದ್ದರಾಮಯ್ಯ ಗೆ ಜನ ನಾಮ ಹಾಕ್ತಾರೆ ಎಂದು ವ್ಯಂಗ್ಯವಾಡಿದ್ರು.
ಸೋಲಿಗೆ ಮೈತ್ರಿಯೇ ಕಾರಣ ಅಂತ ದೇವೇಗೌಡ್ರು ಹೇಳಿದ್ರು.

ಇಷ್ಟೆಲ್ಲ ಆದರೂ ಜೆಡಿಎಸ್ -  ಕಾಂಗ್ರೆಸ್ ನವರು ಮೈತ್ರಿ ಮುಂದುವರೆಸಿರೋದು ಅಧಿಕಾರಕ್ಕಾಗಿ‌ ಮಾತ್ರ. ಇವರಿಬ್ಬರೂ ಅಧಿಕಾರಕ್ಕಾಗಿ ಮೈತ್ರಿ ಆಗಿದಾರೆ, ರಾಜ್ಯದ ಅಭಿವೃದ್ಧಿಗಲ್ಲ ಎಂದರು.

ಸಿದ್ದರಾಮಯ್ಯ ಅದ್ಯಾಕೋ ನಾಮ ಕಂಡ್ರೆ ಸಿಟ್ಟಾಗುತ್ತಾರೆ‌. ಅವರು ಸಿದ್ದರಾಮಯ್ಯಂಗೆ ನಾಮ ಹಾಕಬೇಕಿತ್ತು. ಈಗ ಒಬ್ಬ ಸಂಸದನನ್ನು ಮಾತ್ರ ಗೆಲ್ಲಿಸಿ ಸಿದ್ದರಾಮಯ್ಯಗೆ ಒಂಟಿ ನಾಮ ಹಾಕಿದ್ದಾರೆ. ಜೆಡಿಎಸ್ ಸಹವಾಸ ಹೆಂಡತಿ ಮಕ್ಕಳ ಉಪವಾಸ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದರೂ ಕೇಳದೆ ಅವರು ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ