Select Your Language

Notifications

webdunia
webdunia
webdunia
webdunia

ಗಿಫ್ಟ್ ಕೊಡುವವರನ್ನ ಕಂಡರೆ ಬೇಸ್ತು ಬೀಳುವ ಸಿಎಂ.. ವೇದಿಕೆಯಲ್ಲಿ ಗುಲ್ಬರ್ಗಾ ವಿವಿ ಬಂಗಾರದ ಪದಕ ವಾಪಸ್

ಗಿಫ್ಟ್ ಕೊಡುವವರನ್ನ ಕಂಡರೆ ಬೇಸ್ತು ಬೀಳುವ ಸಿಎಂ.. ವೇದಿಕೆಯಲ್ಲಿ ಗುಲ್ಬರ್ಗಾ ವಿವಿ ಬಂಗಾರದ ಪದಕ ವಾಪಸ್
ಕಲಬುರಗಿ , ಭಾನುವಾರ, 19 ಮಾರ್ಚ್ 2017 (09:37 IST)
ದುಬಾರಿ ವಾಚ್ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯ ಅಕ್ಷರಶಃ ಹೈರಾಣಾಗಿದ್ದಾರೆ. ಯಾರಾದರೂ ಗಿಫ್ಟ್ ಕೊಡೋಕೆ ಬಂದರೆ ಬೇಡಪ್ಪಾ ಗಿಫ್ಟ್ ಸಹವಾಸ ಅನ್ನುತ್ತಿದ್ದಾರೆ. ಕಲಬುರಗಿಯಲ್ಲಿ ಇದೇ ರೀತಿಯ ಪ್ರಸಂಗ ನಡೆದಿದೆ. ಉತ್ತಮ ಬಜೆಟ್ ಮಂಡಿಸಿದ್ದಕ್ಕಾಗಿ ಬಂಗಾರದ ಪದಕ ನೀಡಲು ಮುಂದಾಗಿದ್ದ ಗುಲ್ಬರ್ಗಾ ವಿವಿಗೆ ಸಿದ್ದರಾಮಯ್ಯ ನೋ ಎಂದಿದ್ದಾರೆ.

ಸಚಿವ ಬಸವರಾಜ ರಾಯರೆಡ್ಡಿ ಸಿಎಂಗೆ ಬಂಗಾರದ ಪದಕ ಮತ್ತು ಬೆಳ್ಳಿಯ ಆಕಳು ನೀಡಲು ಮುಂದಾದಾಗ ಅವರನ್ನ ತಡೆದ ಸಿಎಂ, ಇದನ್ನ ನೆನಪಿಗಾಗಿ ವಿಶ್ವವಿದ್ಯಾಲಯದಲ್ಲೇ ಇಟ್ಟುಕೊಳ್ಳಲು ತಿಳಿಸಿದ್ದಾರೆ.

ಈ ಹಿಂದೆ ಸಿಎಂ ಕೈಯಲ್ಲಿದ್ದ ಹ್ಯೂಬ್ಲೋಟ್ ಎನ್ನಲಾದ ವಾಚ್ ಬಗ್ಗೆ ಭಾರೀ ವಿವಾದ ಸೃಷ್ಟಿಸಿತ್ತು. ಸಮಾಜವಾದಿ ಹಿನ್ನೆಲೆಯುಳ್ಳ ಸಿಎಂ ಸಿದ್ದರಾಮಯ್ಯ ಮಜವಾದಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಾಪ್ರಹಾರ ಮಾಡಿದ್ದವು. ಇದಾದ ಬಳಿಕ ೆಲ್ಲಿಯೂ ಸಿಎಂ ಗಿಫ್ಟ್ ಪಡೆಯುವ ಗೋಜಿಗೇ ಹೋಗುತ್ತಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

400 ಪುರುಷರ ಜೊತೆ ಮಲಗಿದರೂ ಈಕೆಗೆ ಅವನು ಬೇಕೇ ಬೇಕಂತೆ..!