Select Your Language

Notifications

webdunia
webdunia
webdunia
webdunia

ರಾಮಮಂದಿರಕ್ಕೆ ದೇಣಿಗೆ ಸಂಗ್ರಹದ ಲೆಕ್ಕ ಕೇಳುವಂತಹ ಅಧಿಕಾರ ನನಗಿದೆ-ಸಿದ್ದರಾಮಯ್ಯ

ರಾಮಮಂದಿರಕ್ಕೆ ದೇಣಿಗೆ ಸಂಗ್ರಹದ ಲೆಕ್ಕ ಕೇಳುವಂತಹ ಅಧಿಕಾರ ನನಗಿದೆ-ಸಿದ್ದರಾಮಯ್ಯ
ಮೈಸೂರು , ಶನಿವಾರ, 20 ಫೆಬ್ರವರಿ 2021 (11:34 IST)
ಮೈಸೂರು : ರಾಮಮಂದಿರಕ್ಕೆ ದೇಣಿಗೆ ಸಂಗ್ರಹದ ಲೆಕ್ಕ ಕೇಳಿದ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ಹರಿಹಾಯ್ದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಸುದ್ದಿಗಾರರೊಂದಿಗೆ ಮಾತನಾಡಿ, ದೇಣಿಗೆಯನ್ನು ರಾಮಮಂದಿರ ನಿರ್ಮಾಣಕ್ಕೆ ನೀಡುತ್ತಿದ್ದಾರೆ. ಬಿಜೆಪಿಗಾಗಿ ದೇಶದಲ್ಲಿರುವ ಜನರು ದೇಣಿಗೆಯನ್ನು ನೀಡುತ್ತಿಲ್ಲ. ಹೀಗಾಗಿ ಅದರ ಬಗ್ಗೆ ಲೆಕ್ಕ ಕೇಳುವಂತಹ ಅಧಿಕಾರ ನನಗಿದೆ. ದೇಶದ ಪ್ರಜೆಯಾಗಿ ನಾನು ಅದರ ಲೆಕ್ಕವನ್ನು ಕೇಳುತ್ತೇನೆ. ನಾನು ದೇಣಿಗೆಯನ್ನು ಕೊಡಲಿ ಬಿಡಲಿ ಲೆಕ್ಕವನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.

ಹಾಗೇ ದೇಣಿಗೆ ಸಂಗ್ರಹ ಲೆಕ್ಕ ನೀಡುವುದಕ್ಕೆ ಹಿಂದೇಟು ಹಾಕ್ತಿದ್ದಾರೆ. ಇದರ ಅರ್ಥ ಹಣ ದುರುಪಯೋಗವಾಗುತ್ತಿದೆ ಎಂಬುದು. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿದ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದು ಅವರು ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಹೆಚ್.ಡಿ.ಕುಮಾರಸ್ವಾಮಿ ನನಗೆ ಲೆಕ್ಕಕ್ಕೆ ಇಲ್ಲ ಎಂದ ಬಿಜೆಪಿ ಸಚಿವ