Webdunia - Bharat's app for daily news and videos

Install App

ಶೋಭಾ ಕರಂದ್ಲಾಜೆ ಸತ್ಯ ಹೇಳುವುದು ತೀರಾ ಕಡಿಮೆ : ಹೆಚ್‌ಕೆ ಪಾಟೀಲ್

Webdunia
ಭಾನುವಾರ, 30 ಜುಲೈ 2023 (06:52 IST)
ಗದಗ : ಶೋಭಾ ಕರಂದ್ಲಾಜೆ ಸತ್ಯ ಹೇಳುವುದು ತೀರಾ ಕಡಿಮೆ. ಈ ಪ್ರಕರಣದಲ್ಲಿ ಯಾರಿದ್ದಾರೆ ಅವರ ಹೇಳಿಕೆ ತೆಗೆದುಕೊಳ್ಳಲಾಗಿದೆ ಎಂದು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ತಿರಗೇಟು ನೀಡಿದ್ದಾರೆ.
 
ಉಡುಪಿ ವಿಡಿಯೋ ಚಿತ್ರೀಕರಣದ ಕುರಿತು ನಗರದ ಬಿಂಕದಕಟ್ಟೆ ಮೃಗಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಪ್ರಕಾರ ವರ್ಷದಿಂದ ತಂತ್ರಗಾರಿಕೆ ನಡೆಯುತ್ತಿದ್ದರೆ ಆಗ ನೀವು ಏನು ಮಾಡ್ತಿದ್ರಿ? ಒಂದು ವರ್ಷ ನಿಮ್ಮದೇ ಸರ್ಕಾರ ಇದ್ದರೂ ಯಾಕೆ ಸುಮ್ಮನಿದ್ರಿ? ಇಂಟಲಿಜೆನ್ಸ್, ಪೊಲೀಸ್ ಇಲಾಖೆ ನಿಮ್ಮ ಕೈಯಲ್ಲಿ ಇತ್ತಲ್ವಾ? ಯಾಕೆ ಸುಮ್ಮನಿದ್ರಿ? ನಾವು ಬಂದು ಎರಡು ತಿಂಗಳಲ್ಲಿ ಎಲ್ಲಾ ಪತ್ತೆ ಮಾಡಿದೆವು. ಸಣ್ಣ ವಯಸ್ಸಿನವರ ಇಂತಹ ನಗೆಪಾಟಲಿಗೆ ಸಮಾಜ ಒಪ್ಪಲ್ಲ, ಯಾರೂ ಒಪ್ಪಲ್ಲ ಎಂದು ಹರಿಹಾಯ್ದರು. 

ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಆರೋಪಕ್ಕೆ ಸಿಎಂಗೆ ಹೈಕೋರ್ಟ್ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಬಗ್ಗೆ ನಮಗೂ ಅರ್ಜಿ ಬಂದಿದೆ. ಗ್ಯಾರಂಟಿ, ವಚನ ಕೊಡುವುದು, ಮಾತು ಕೊಡುವುದು ಚುನಾವಣೆಯಲ್ಲಿ ವಿಶೇಷವಾದದ್ದು. ಚುನಾವಣೆ ಆಯೋಗದವರು ಕ್ರಮ ತೆಗೆದುಕೊಳ್ಳುವುದಾದರೇ ಮೊದಲು ಧರ್ಮ, ಜಾತಿ ಹೆಸರಿನ ಮೇಲೆ ಹಣ ಪೋಲು ಮಾಡುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments