Select Your Language

Notifications

webdunia
webdunia
webdunia
webdunia

6 ತಿಂಗಳಲ್ಲಿ ಬಿಎಸ್‌ವೈ ಸಿಎಂ ಆಗ್ತಾರೆ, ಆಗಿದೆ ನಿಮಗೆ ಮಾರಿಹಬ್ಬ: ಕರಂದ್ಲಾಜೆ

6 ತಿಂಗಳಲ್ಲಿ ಬಿಎಸ್‌ವೈ ಸಿಎಂ ಆಗ್ತಾರೆ, ಆಗಿದೆ ನಿಮಗೆ ಮಾರಿಹಬ್ಬ: ಕರಂದ್ಲಾಜೆ
ಪುತ್ತೂರು , ಶುಕ್ರವಾರ, 10 ನವೆಂಬರ್ 2017 (17:42 IST)
ಟಿಪ್ಪು ಜಯಂತಿ ದಿನದಂದು ಓಡಾಡಲು ಬಾಂಡ್ ಬರೆದುಕೊಡಬೇಕಂತೆ. ಬಾಂಡ್ ಬರೆದುಕೊಡದಿದ್ದಲ್ಲಿ ವಾರೆಂಟ್ ಜಾರಿ ಮಾಡ್ತಾರಂತೆ ಎಂದು ಪೊಲೀಸರ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಆವಾಗ ನಮ್ಮ ಹುಡುಗರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತಕ್ಕ ಪಾಠ ಕಲಿಸುತ್ತಾರೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
 
ಪೊಲೀಸರು ಇಲ್ಲಿಗೆ ಬಂದಿರುವುದು ನಮ್ಮನ್ನು ಕಾಯಲು ಅಲ್ಲ. ನಮ್ಮ ಯಾತ್ರೆಯ ವರದಿಯನ್ನು ಸಂಗ್ರಹಿಸಲು ಬಂದಿದ್ದಾರೆ. ಇಂತಹ ಪೊಲೀಸರಿಗೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತ್ರ ಸೂಕ್ತ ರೀತಿಯಲ್ಲಿ ವಿಚಾರಣೆ ಮಾಡುತ್ತೇವೆ ಎಂದು ಗುಡುಗಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಯಾತ್ರೆಗೆ ಜನ ಸೇರುತ್ತಿಲ್ಲ ಎಂದು ಲೇವಡಿ ಮಾಡುತ್ತಿದ್ದಾರೆ. ಆದರೆ, ಒಂದು ಬಾರಿ ಪುತ್ತೂಬರಿಗೆ ಬಂದ ನೋಡಲಿ ಅವಾಗ ತಿಳಿಯುತ್ತದೆ ಬಿಜೆಪಿಯ ಜನ ಬೆಂಬಲ ಎಂದು ಬಿಜೆಪಿ ಸಂಸದ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ತಾಯಿಯನ್ನೇ ಕಾಮದಾಟಕ್ಕೆ ಕರೆದು ಪೊಲೀಸ್ ಅತಿಥಿಯಾದ ಭೂಪ