Select Your Language

Notifications

webdunia
webdunia
webdunia
webdunia

ಶೋಭಾ ಕರಂದ್ಲಾಜೆ, ಡಿವಿಎಸ್ ಬೇನಾಮಿ ಆಸ್ತಿ ತನಿಖೆಯಾಗಲಿ: ಸಚಿವ ರೈ

ಶೋಭಾ ಕರಂದ್ಲಾಜೆ, ಡಿವಿಎಸ್ ಬೇನಾಮಿ ಆಸ್ತಿ ತನಿಖೆಯಾಗಲಿ: ಸಚಿವ ರೈ
ಬೆಂಗಳೂರು , ಸೋಮವಾರ, 10 ಜುಲೈ 2017 (17:10 IST)
ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಬೇನಾಮಿ ಆಸ್ತಿಯ ಬಗ್ಗೆ ತನಿಖೆಯಾಗಲಿ ಎಂದು ಅರಣ್ಯ ಖಾತೆ ಸಚಿವ ರಮಾನಾಥ್ ರೈ ಒತ್ತಾಯಿಸಿದ್ದಾರೆ.
 
ಕರಂದ್ಲಾಜೆ, ಸದಾನಂದಗೌಡರು ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಅವರ ಆಸ್ತಿಯ ಬಗ್ಗೆ ಜಾರಿ ನಿರ್ದೆಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯಿಂದ ತನಿಖೆಯಾಗಲಿ ಎಂದು ಸವಾಲ್ ಹಾಕಿದ್ದಾರೆ.
 
ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಗಲಭೆಗಳಿಗೆ ನಾವು ಪ್ರಚೋದಿಸಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ರೆ, ಸುಬ್ರಹ್ಮಣ್ಯಂ ಸ್ವಾಮಿ ದೇವರು ನೋಡಿಕೊಳ್ಳಲಿ ಎಂದು ಗುಡುಗಿದ್ದಾರೆ.
 
ಮಾಜಿ ಸಚಿವೆ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಹುದ್ದೆಗೆ ತಕ್ಕಂತೆ ವರ್ತಿಸಬೇಕು. ಮನಬಂದಂತೆ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಸಚಿವ ರಮಾನಾಥ್ ರೈ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಸತ್ಯ ಒಪ್ಪಿಕೊಂಡ ಕಾಂಗ್ರೆಸ್