Webdunia - Bharat's app for daily news and videos

Install App

ಶಿವರಾಂ ಕಾರಂತ್ ಲೇಔಟ್ ಅವ್ಯವಸ್ಥೆ

Webdunia
ಶುಕ್ರವಾರ, 19 ನವೆಂಬರ್ 2021 (18:17 IST)
ಶಿವರಾಮ ಕಾರಂತ್ ಲೇಔಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಹಾರ (ಅರ್ಹತಾ) ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ಯಲಹಂಕ ತಾಲೂಕಿನ ತಮ್ಮ ಗ್ರಾಮಗಳಲ್ಲಿ ಗುರುವಾರ ಮೊದಲ ಬ್ಯಾಚ್‌ನ 'ಅರ್ಹತಾ ಪ್ರಮಾಣ ಪತ್ರ'ಗಳನ್ನು ಬಿಡಿಎ ಅಧಿಕಾರಿಗಳು ಹಸ್ತಾಂತರಿಸಿದರು.ಬಿಡಿಎದ ಭೂಸ್ವಾಧೀನ ಕೋಶದ ಜಿಲ್ಲಾಧಿಕಾರಿ ಡಾ.ಎ.ಸೌಜನ್ಯ ನೇತೃತ್ವದ ಬಿಡಿಎ ತಂಡ ಕಲ್ತಮ್ಮನಹಳ್ಳಿ ಮತ್ತು ಗಾಣಿಗರಹಳ್ಳಿಗೆ ಭೇಟಿ ನೀಡಿ ಭೂಮಿ ಕಳೆದುಕೊಂಡ 22 ಮಂದಿ ರೈತರಿಗೆ ಪ್ರಮಾಣ ಪತ್ರ ವಿತರಿಸಿತು. ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪರಿಹಾರ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ.ಈ ಕುರಿತು ಮಾತನಾಡಿದ 'ನಮ್ಮ ಲೇಔಟ್‌ಗಳಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡವರು ನಗದು ಪಾವತಿ ಅಥವಾ 40:60 ಪರಿಹಾರ ಒಪ್ಪಂದಕ್ಕೆ ಅರ್ಹರಾಗಿರುತ್ತಾರೆ, ಇದರಲ್ಲಿ ಅವರು ಒಪ್ಪಿಸಿದ ಪ್ರತಿ ಎಕರೆ ಭೂಮಿಗೆ 40% ಅಭಿವೃದ್ಧಿ ಹೊಂದಿದ ಭೂಮಿಯನ್ನು (9,583 ಚದರ ಅಡಿ) ಪಡೆಯುತ್ತಾರೆ. ಈ ಪ್ರಮಾಣ ಪತ್ರವು ಬಹುತೇಕ ಗ್ಯಾರಂಟಿ ಕಾರ್ಡ್‌ನಂತಿದ್ದು, ನಾವು ಶೀಘ್ರದಲ್ಲೇ ಸೈಟ್ ಹಂಚಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ಅವರಿಗೆ ಆದ್ಯತೆ ನೀಡಿ ಪರಿಹಾರ ನೀಡಲಾಗುತ್ತದೆ ಎಂದು ಬಿಡಿಎ ಅಧಿಕಾರಿ ಸೌಜನ್ಯ ಹೇಳಿದರು.ಇದೇ ವಿಚಾರವಾಗಿ ಮಾತನಾಡಿದ ಸುಪ್ರೀಂಕೋರ್ಟ್ ಸಮಿತಿಯ ಸದಸ್ಯ ಜಯಕಾರ್ ಜೆರೋಮ್ ಅವರು, ಈ ಪ್ರಮಾಣಪತ್ರದಲ್ಲಿ ಭೂಮಿ ಕಳೆದುಕೊಂಡವರ ಹೆಸರು, ಕ್ರಮಸಂಖ್ಯೆ, ಗ್ರಾಮ, ಹಸ್ತಾಂತರಿಸಿದ ಜಮೀನಿನ ವಿಸ್ತೀರ್ಣ ಮತ್ತು ಭವಿಷ್ಯದಲ್ಲಿ ನೀಡಲಾಗುವ ಅಭಿವೃದ್ಧಿಪಡಿಸಿದ ಭೂಮಿಯ ಪ್ರಮಾಣದ ಎಲ್ಲ ಮಾಹಿತಿ ಇದೆ. ಲೇಔಟ್ ರಚನೆಯಾದ ನಂತರ ಒಂದು ಎಕರೆಗೆ ಪರಿಹಾರವಾಗಿ ನೀಡಲಾದ ಭೂಮಿ ಮೂರು 60x40 ಚದರ ನಿವೇಶನಗಳನ್ನು ಮತ್ತು 30x40 ಚದರ ನಿವೇಶನವನ್ನು ಹೊಂದಿರಬಹುದು. ಭೂಮಾಲೀಕರು ಕೇವಲ ಒಂದು ನಿವೇಶನವನ್ನು ಮಾರಾಟ ಮಾಡಿ ಉತ್ತಮ ಹಣವನ್ನು ಪಡೆಯಬಹುದು ಮತ್ತು ಉಳಿದದ್ದನ್ನು ಉಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

Raj Raghuvamshi murder: ಸೋನಂಳನ್ನು ಅಕ್ಕ ಎನ್ನುತ್ತಿದ್ದ ಮರ್ಡರ್ ಆದ ದಿನವೂ ಊರಲ್ಲೇ ಇದ್ದ

Indore Raja Raghuvamshi murder: ವಿಮಾನ ನಿಲ್ದಾಣದಲ್ಲೇ ಆರೋಪಿ ರಾಜ್ ಕುಶ್ವಾಹ್ ಗೆ ಕಪಾಳ ಮೋಕ್ಷ ವಿಡಿಯೋ

ಮುಂದಿನ ಸುದ್ದಿ
Show comments