Select Your Language

Notifications

webdunia
webdunia
webdunia
webdunia

ದಕ್ಷ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ ವರ್ಗಾವಣೆ: ಶಿವಮೊಗ್ಗದಲ್ಲಿ ಆಕ್ರೋಶ

ದಕ್ಷ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ ವರ್ಗಾವಣೆ: ಶಿವಮೊಗ್ಗದಲ್ಲಿ ಆಕ್ರೋಶ
ಶಿವಮೊಗ್ಗ , ಮಂಗಳವಾರ, 23 ಆಗಸ್ಟ್ 2016 (11:11 IST)
ದಕ್ಷ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ ಅವರನ್ನು ಶಿವಮೊಗ್ಗ ಜಿಲ್ಲೆಯಿಂದ ಮೈಸೂರಿಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವರ್ಗಾವಣೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆಗೆ ನಿರ್ಧರಿಸಿವೆ.
 
ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟಿ ಪೊಲೀಸ್ ಚೌಕಿ ಉದ್ಘಾಟನೆ ಕಾರ್ಯಕ್ರಮದಲ್ಲಿ ದಕ್ಷ ಅಧಿಕಾರಿ ರವಿ ಚೆನ್ನಣ್ಣನವರ್ ತಮ್ಮ ವರ್ಗಾವಣೆ ಆದೇಶವನ್ನು ನೆನೆದು ಕಣ್ಣೀರಿಟ್ಟರು. ಒಂದುವರೆ ವರ್ಷದ ಹಿಂದೆ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಅವರು, ಸರ್ವಜನಿಕರ ಪ್ರೀತಿ ವಿಶ್ವಾಸಗಳಿಸಿದ್ದರು.
 
ರವಿ ಚೆನ್ನಣ್ಣನವರ್ ಅವರ ವರ್ಗಾವಣೆಗೆ ಬಿಜೆಪಿ ನಾಯಕನಿಗೆ ಸೇರಿದ್ದ ಗೂಡಂಗಡಿ ತೆರವು ಕಾರ್ಯಚರಣೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಇವರ ಸ್ಥಾನಕ್ಕೆ ಮೈಸೂರು ಎಸ್‌ಪಿಯಾಗಿರುವ ಅಭಿನವ್ ಖರೆ ಅವರನ್ನು ವರ್ಗಾವಣೆ ಮಾಡಲಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಹೇಯ: ಮಲಗಿದ್ದ ಮಗುವನ್ನು ಹೊತ್ತೊಯ್ದು ಗ್ಯಾಂಗ್‌ರೇಪ್