ಸೋದೆ ಮಠದ ಸುಪರ್ದಿಗೆ ಶೀರೂರು ಮಠ

Webdunia
ಗುರುವಾರ, 26 ಜುಲೈ 2018 (16:13 IST)
ಶೀರೂರು ಶ್ರೀಗಳ ನಿಗೂಢ ಸಾವಿನ ಪ್ರಕರಣ ನಂತರ ಶೀರೂರು ಮೂಲ ಮಠದ ಆಡಳಿತ  ಉಸ್ತುವಾರಿಗೆ  ಸೋದೆ ಮಠದ ವಿಶ್ವ ವಲ್ಲಭ ತೀರ್ಥರು ಮಠದ ಮಾಜಿ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಅವರನ್ನು ನೇಮಿಸಿದ್ದಾರೆ.

ಸದ್ಯ ಶಿರೂರು ಮಠದ ಒಳಗೆ  ಇತರರ  ಪ್ರವೇಶಕ್ಕೆ ನಿರ್ಬಂಧವನ್ನು ಹೇರಿರುವ ಪೋಲಿಸ್ ಇಲಾಖೆ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಹಾಗೂ ಇಬ್ಬರು ಅರ್ಚಕರಿಗೆ ಹಾಗೂ ಒಬ್ಬ ಕ್ಲೀನರ್ ಗೆ ಮಾತ್ರ ಮಠದ ಪ್ರವೇಶಕ್ಕೆ ಅನುಮತಿ ನೀಡಿದೆ.

ಮೂಲ ಮಠದಲ್ಲಿ ಸುಬ್ರಹ್ಮಣ್ಯ ಭಟ್ ಅವರ ಉಸ್ತುವಾರಿಯಲ್ಲಿ ವಿಠಲ ಹಾಗೂ ಇತರ ದೇವರುಗಳ ಪೂಜೆ ನಡೆಯುತ್ತಿದೆ
ಇನ್ನೂ ಶಿರೂರು ಮಠ 2500 ಏಕ್ರೆಗೂ  ಹೆಚ್ಚು  ಭೂಮಿ ಇದೆ. ಮಠದ ಅಸ್ತಿ ಅತೀಕ್ರಮಣ ಆಗುತ್ತೇ ಎಂಬ ಕಾರಣಕ್ಕಾಗಿ ಶಿರೂರು ಶ್ರೀಗಳ ಸಾವಿನ ಬಳಿಕ ಸಂಪ್ರದಾಯದಂತೆ ಶಿರೂರು ಮೂಲ ಮಠವನ್ನು ಸೋದೆ ಮಠ ತನ್ನ ಸುರ್ಪದಿಗೆ ತೆಗೆದುಕೊಂಡಿದೆ.
ಈಗ ಮಠದ ಆಸ್ತಿ ಪಾಸ್ತಿಗಳ ಮೇಲ್ವಿಚಾರಣೆಯನ್ನು ಸೋದೆ ಮಠ ನೋಡುತ್ತಿದ್ದು, ಇದರ ಉಸ್ತುವಾರಿಯ ಕೆಲಸವನ್ನು ಸುಬ್ರಹ್ಮಣ್ಯ ಭಟ್ ಅವರಿಗೆ ವಹಿಸಲಾಗಿದೆ. ಮಠದ ಒಳಗೆ ಪ್ರವೇಶಿಸುವಾಗ ಸುಬ್ರಹ್ಮಣ್ಯ ಭಟ್ , ಅರ್ಚಕರು ಮತ್ತು ಒಬ್ಬ ಕ್ಲೀನರ್ ಪೋಲಿಸ್ ಇಲಾಖೆಯ ದಾಖಲೆಗಳಿಗೆ ಸಹಿ ಹಾಕಿಯೇ ಒಳ ಪ್ರವೇಶಿಸಬೇಕಾಗುತ್ತದೆ. ಇನ್ನೂ ಶಿರೂರು ಮೂಲ ಮಠದಲ್ಲಿ ವೈದ್ಯರ ತಂಡವೊಂದು ಬೀಡು ಬಿಟ್ಟಿರುವ ವಿಚಾರ ತಿಳಿದು ಬಂದಿದೆ. ತಂಡದಲ್ಲಿ ಸುಮಾರು 10 ಕ್ಕೂ ಹೆಚ್ಚು ವೈದ್ಯರು ಮಠದ ಸುತ್ತಾ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

19 ವರ್ಷದ ಯುವಕನೊಂದಿಗೆ ಸರಸ ಸಲ್ಲಾಪ ಮಾಡಿ ಸಿಕ್ಕಿಬಿದ್ದ 35 ರ ವಿವಾಹಿತ ಮಹಿಳೆ: ಮುಂದೇನಾಯ್ತು ನೋಡಿ Video

ಕ್ಯಾಬಿನೆಟ್ ವಿಸ್ತರಣೆಯಾಗುತ್ತದೆ, ಸಚಿವ ಸ್ಥಾನ ಸಿಗುತ್ತದೆ ಎಂದುಕೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ನಿರಾಸೆ

ನಹೀ ಜಾನಾ ಹೈ.. ಎಂದು ಸಮಯ ಮುಗಿದರೂ ಬ್ಯಾಂಕ್ ಗೇಟ್ ಲಾಕ್ ಮಾಡಿ ಕೆಲಸ ಮಾಡಿಸಿದ ಮ್ಯಾನೇಜರ್ Video

ಸಿಜೆಪಿ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿಯ ನೆಲಕ್ಕೆ ಹಾಕಿ ತುಳಿದ ಪ್ರತಿಭಟನಾಕಾರರು: Video

ರಾಹುಲ್ ಗಾಂಧಿ ಸಂಸತ್ ನಲ್ಲಿ ನೀಟ್ ಅಕ್ರಮ ಚರ್ಚೆ ಮಾಡಲು ನೋಟಿಸ್ ಕೂಡಾ ಕೊಡದೇ ಪ್ರತಿಭಟನೆ ಮಾಡ್ತಿದ್ದಾರೆ: ಜಿತೇಂದ್ರ ಸಿಂಗ್

ಮುಂದಿನ ಸುದ್ದಿ
Show comments