Select Your Language

Notifications

webdunia
webdunia
webdunia
webdunia

ಶಿರೂರಿನಲ್ಲಿ ಅರ್ಜುನ್ ಗಾಗಿ ಹುಡುಕಾಟ ಇನ್ನೂ ನಿಂತಿಲ್ಲ: ಲೇಟೆಸ್ಟ್ ಮಾಹಿತಿ

Shiroor Arjun

Krishnaveni K

ಶಿರೂರು , ಶನಿವಾರ, 21 ಸೆಪ್ಟಂಬರ್ 2024 (10:45 IST)
ಶಿರೂರು: ಗುಡ್ಡ ಕುಸಿತದಿಂದ ಕಣ್ಮರೆಯಾಗಿದ್ದ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಗಾಗಿ ಹುಡುಕಾಟ ಇನ್ನೂ ನಿಂತಿಲ್ಲ. ಇಂದು ಮತ್ತೆ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ನಡೆಯಲಿದೆ.

ಜುಲೈ 16 ಕ್ಕೆ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಇದರಲ್ಲಿ ಕೆಲವರು ಸಾವನ್ನಪ್ಪಿದ್ದು, ಈ ಪೈಕಿ ಕೆಲವು ಮೃತದೇಹಗಳಷ್ಠೇ ಪತ್ತೆಯಾಗಿತ್ತು. ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಕೂಡಾ ತಮ್ಮ ಟ್ರಕ್ ಸಮೇತ ನಾಪತ್ತೆಯಾಗಿದ್ದರು. ಅವರ ಮೃತದೇಹ ಇನ್ನೂ ಸಿಕ್ಕಿಲ್ಲ. ಆದರೆ ಅವರ ಲಾರಿಯ ಕೆಲವು ಅವಶೇಷಗಳು ನದಿ ನೀರಿನಲ್ಲಿ ಪತ್ತೆಯಾಗಿತ್ತು.

ಹಾಗಿದ್ದರೂ ಅವರ ಹುಡುಕಾಟ ಇನ್ನೂ ನಿಂತಿಲ್ಲ. ಕನಿಷ್ಠ ಅರ್ಜುನ್ ಮೃತದೇಹದ ಭಾಗವಾದರೂ ಹುಡುಕಿಕೊಡಿ ಎಂದು ಅವರ ಕುಟುಂಬಸ್ಥರು ಬೇಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಳೆ ತೀವ್ರವಾಗಿದ್ದರಿಂದ ನದಿ ನೀರಿನಲ್ಲಿ ಹುಡುಕಾಟ ಕಷ್ಟವಾಗಿತ್ತು. ಆದರೆ ಈಗ ಮಳೆ ಕಡಿಮೆಯಾಗಿದ್ದು, ನೀರು ತಿಳಿಯಾಗಿದೆ.

ಹೀಗಾಗಿ ನದಿ ನೀರಿನಲ್ಲಿ ಇಂದಿನಿಂದ ಮತ್ತೆ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ಆರಂಭವಾಗಲಿದೆ.  ನಾವಿಕರು ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಗಂಗಾವಳಿ ನದಿಯಲ್ಲಿ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಿದ್ದಾರೆ. ಈ ಬಾರಿ ಅವರ ಹುಡುಕಾಟಕ್ಕೆ ಫಲ ಸಿಗಲಿದೆ ಎಂಬ ವಿಶ್ವಾಸ ಕುಟುಂಬದವರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಪ್ರಧಾನಿ ಮೋದಿ ಅಮೆರಿಕಾ ಟೂರ್ ಶುರು