Select Your Language

Notifications

webdunia
webdunia
webdunia
webdunia

ರಾಷ್ಟ್ರಧ್ವಜದಲ್ಲಿ ರಾಜಕೀಯ ‌ಮಾಡುವ ಕಾಂಗ್ರೆಸ್​​ಗೆ ನಾಚಿಕೆ ಆಗಬೇಕು - ಜಗದೀಶ್ ಶೆಟ್ಟರ್

p
ಹುಬ್ಬಳ್ಳಿ , ಭಾನುವಾರ, 7 ಆಗಸ್ಟ್ 2022 (15:17 IST)
ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ‌ಮಾಡುತ್ತಿದ ಕಾಂಗ್ರೆಸ್ ಗೆ ನಾಚಿಕೆ ಆಗಬೇಕು ಎಂದು ಮಾಜಿ‌ ಸಿಎಂ ಜಗದೀಶ್ ಶೆಟ್ಟರ್  ವಾಗ್ದಾಳಿ ನಡೆಸಿದ್ದಾರೆ.
 
ಖಾದಿಗೆ ಪ್ರಧಾನಿ ಮೋದಿಯವರು ನೀಡಿರುವ ಮನ್ನಣೆಯನ್ನು ಕಾಂಗ್ರೆಸ್​ಗೆ ಸಹಿಸಲು ಆಗುತ್ತಿಲ್ಲ. ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಸಿದ್ದರಾಮಯ್ಯ ಬಹಳಷ್ಟು ವ್ಯಂಗವಾಡುತ್ತಿದ್ದಾರೆ. ಅವರು ಐದು ವರ್ಷ ಸಿಎಂ ಆಗಿದ್ದವರು ಅವರು ಧ್ವಜದ ಬಗ್ಗೆ ಈ‌ ರೀತಿಯಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ. ಅವರು ಸಿಎಂ ಆಗಿದ್ದಾಗ ಖಾದಿ ಗ್ರಾಮೋದ್ಯೋಗಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎನ್ನುವುದು ನೆನಪು ಮಾಡಿಕೊಳ್ಳಿ. ಖಾದಿ ಗ್ರಾಮೋದ್ಯೋಗ ಕಾರ್ಮಿಕರ ವಿಚಾರದಲ್ಲಿ ಬಿಜೆಪಿ ಮಾಡಿಕೊಟ್ಟಿರುವ ಪ್ರೊತ್ಸಾಹ ಯಾರು‌ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿತ...!