Webdunia - Bharat's app for daily news and videos

Install App

ಬಾಲಕಿಗೆ ತಿಂಡಿ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ !

Webdunia
ಗುರುವಾರ, 9 ಡಿಸೆಂಬರ್ 2021 (08:04 IST)
ಚಿಕ್ಕಮಗಳೂರು : ಅಂಗಡಿಗೆ ತಿಂಡಿ ತರಲು ಹೋಗಿದ್ದ ಐದು ವರ್ಷದ ಪುಟ್ಟ ಮಗುವಿನ ಜೊತೆ ಅಂಗಡಿ ಮಾಲೀಕ ಅಸಭ್ಯವಾಗಿ ವರ್ತಿಸಿ,
ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ದೂರು ದಾಖಲಾಗಿರು ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಣಕಲ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕೂಲಿ ಮಾಡಿಕೊಂಡು ಕುಟುಂಬವೊಂದು ವಾಸವಿತ್ತು. ಇಬ್ಬರು ಮಕ್ಕಳು ದೊಡ್ಡ ಮಗು ಐದು ವರ್ಷದ ಹೆಣ್ಣು ಮಗು, ಚಿಕ್ಕದ್ದು 10 ತಿಂಗಳ ಗಂಡು ಮಗು ಮನೆ ಯಜಮಾನ ಕೆಲಸಕ್ಕೆ ಹೋಗುತ್ತಿದ್ದನು.
ತಾಯಿ ಚಿಕ್ಕ ಮಕ್ಕಳಾದ ಕಾರಣ ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು. ಮಗು ಚಿಕ್ಕದ್ದಾಗಿದ್ದರಿಂದ ತಾಯಿ ಮನೆಗೆ ಬೇಕಾದ ಸಣ್ಣ-ಪುಟ್ಟ ದಿನಸಿ ಸಾಮಾನುಗಳನ್ನು ತರಲು ಐದು ವರ್ಷದ ಮಗುವನ್ನು ಕಳುಹಿಸುತ್ತಿದ್ದಳು. ಇತ್ತೀಚೆಗೆ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಮಗು ಅಮ್ಮನ ಬಳಿ ತಿನ್ನಲು ಏನಾದರು ತಿಂಡಿ ಕೊಡುವಂತೆ ಕೇಳಿದೆ.
ಆಗ ಅಮ್ಮ ಮಗುವಿನ ಕೈಗೆ ದುಡ್ಡು ನೀಡಿ ಅಂಗಡಿ ಹೋಗಿ ತಿಂಡಿ ತರಲು ಹೇಳಿದ್ದಾಳೆ. ಆಗ ಮಗು ಅಂಗಡಿಗೆ ಹೋಗುವುದಿಲ್ಲ ಎಂದು ಹಠ ಮಾಡಿದೆ. ಅಮ್ಮ ಏಕೆ ಎಂದು ಪ್ರಶ್ನಿಸಿದ್ದಕ್ಕೆ ನಾನು ಅಂಗಡಿ ಹೋದಾಗ ಮಾಮ ನನ್ನನ್ನು ಒಳಗೆ ಕರೆದುಕೊಂಡು ಹೋಗುತ್ತಾರೆ ಎಂದು ಅಂಗಡಿ ಮಾಲೀಕನ ಕುಚೇಷ್ಠೆ ಬಗ್ಗೆ ಹೇಳಿದ್ದಾಳೆ.
ನಾನು ಅಂಗಡಿಗೆ ಹೋದಾಗೆಲ್ಲಾ ಹೀಗೆ ಮಾಡುತ್ತಾರೆ ಎಂದು ಮಗು ಹೇಳಿದೆ. ಮನೆಗೆ ಬರಲ್ಲ ಎಂದು ಹೇಳಿದರೆ, ದುಡ್ಡು ಕೊಡುವುದಿಲ್ಲ ತಿಂಡಿಯನ್ನೂ ಕೊಡುವುದಿಲ್ಲ. ನಿನ್ನನ್ನು ಮನೆಗೆ ಕಳುಹಿಸುವುದಿಲ್ಲ ಇಲ್ಲೇ ಕಟ್ಟಿ ಹಾಕುತ್ತೇನೆ ಎನ್ನುತ್ತಾರೆ ಎಂದು ಮಗು ತಾಯಿ ಬಳಿ ಹೇಳಿದೆ.
ತಾಯಿ ಯಾವಾಗ ಹೀಗೆ ಮಾಡಿದ್ದಾನೆ ಎಂದು ಕೇಳಿದಾಗ ಅಂಗನವಾಡಿಗೆ ಹೋಗದೆ ಮನೆಯಲ್ಲೇ ಇದ್ದಾಗ ಈ ರೀತಿ ಮಾಡಿದ್ದಾನೆ ಎಂದು ಹೇಳಿದೆ. ಹಾಗಾಗಿ, ತಾಯಿ ಕೂಲಿಗೆ ಹೋಗಿದ್ದ ಗಂಡ ಬಂದ ಕೂಡಲೇ ವಿಷಯ ತಿಳಿಸಿ ಚಿಕ್ಕ ಮಗುವಿನ ಜೊತೆ ಅಸಭ್ಯವಾಗಿ ವರ್ತಿಸಿದ ಅಂಗಡಿ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Israel-Iran conflict: ಇರಾನ್‌ನಲ್ಲಿ ಮೃತರ ಸಂಖ್ಯೆ 230ಕ್ಕೆ ಏರಿಕೆ: 1,277ಕ್ಕೂ ಅಧಿಕ ಮಂದಿ ಗಾಯ

Karnataka Rains: ಮಂಗಳೂರಿನಲ್ಲಿ ಈಗ ಇರೋದು ರೋಡಲ್ಲ ಎಲ್ಲಾ ತೋಡು

16ನೇ ಜನಗಣತಿಗೆ ಮೂಹೂರ್ತ ಫಿಕ್ಸ್‌: ಜಾತಿಗಣತಿಗೂ ಗ್ರೀನ್‌ಸಿಗ್ನಲ್‌, ಎಷ್ಟು ಹಂತದಲ್ಲಿ ನಡೆಯುತ್ತೆ ಗೊತ್ತಾ

Viral Video: ರೈಲಿನಲ್ಲಿ ಮಹಿಳೆಯರ ಮುಂದೆ ನಿಂತು ಪ್ಯಾಂಟ್ ಜಿಪ್ ತೆರೆದು ನಿಂತ ಯುವಕ

ಮೈಸೂರಿಗೆ 5 ರೂ ಕೊಟ್ಟಿಲ್ಲ, ನಿಮ್ಮಪ್ಪ ರಾಜೀನಾಮೆ ಕೊಡ್ಲಿ: ಯತೀಂದ್ರಗೆ ಸಲಹೆ ಕೊಟ್ಟ ಪ್ರತಾಪ್ ಸಿಂಹ

ಮುಂದಿನ ಸುದ್ದಿ