ಇಂಜಿನಿಯರಿಂಗ್ ಪ್ರವೇಶಕ್ಕೆ ನಡೆದ ಕಾಮೆಡ್ ಕೆ ಪರೀಕ್ಷೆಯಲ್ಲಿ ಪೊಲೀಸರು ಮತ್ತು ಪೋಷಕರು ಟಿಸಿಎಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಪೋಷಕರಿಗೆ ಟಿಸಿಎಸ್ ಸಿಬ್ಬಂದಿ ಪರೀಕ್ಷಾ ಮೇಲ್ವಿಚಾರಕ ಮಂಜುನಾಥ್ ಧಮ್ಕಿ ಹಾಕಿದ್ದರಿಂದ ಅವರ ಜತೆ ವಾಗ್ವಾದಕ್ಕೆ ಪೋಷಕರು ಇಳಿದರು.
ಸರ್ವರ್ ಕೈಕೊಟ್ಟಿದ್ದರಿಂದ ಪರೀಕ್ಷೆ ವಿಳಂಬವಾಗಿದ್ದರಿಂದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಪರೀಕ್ಷೆ ಎದುರಿಸುವುದು ವಿಳಂಬವಾಯಿತು. ಹಾಲ್ ಟಿಕೆಟ್ ರಿಜಿಸ್ಟರ್ ನಂಬರ್ ನಮೂದು ಮಾಡಿದರೂ ವಿದ್ಯಾರ್ಥಿಗಳಿಗೆ ಲಾಗಿನ್ ಆಗಲು ಸಾಧ್ಯವಾಗದೇ ಹೋಯಿತು.
ಇದರಿಂದ ಆತಂಕಿತರಾದ ಪೋಷಕರು ಟಿಸಿಎಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಗ ಪೋಷಕರು ಮತ್ತು ಪೊಲೀಸರಿಗೆ ಧಮ್ಕಿ ಹಾಕಿದ ಪರೀಕ್ಷಾ ಮೇಲ್ವಿಚಾರಕ ಮಂಜುನಾಥ್,. ಇದು ಕಾಮೆಡ್ ಕೆ ಪರೀಕ್ಷೆ ನಾವು ಹೇಗೆ ಬೇಕಾದರೂ ಮಾಡಿಕೊಳ್ಳುತ್ತೇವೆ ಎಂದು ದರ್ಪದ ಮಾತುಗಳನ್ನು ಆಡಿದಾಗ ಪೊಲೀಸರು ಮತ್ತು ಪೋಷಕರು ಟಿಸಿಎಸ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು.