Webdunia - Bharat's app for daily news and videos

Install App

ಮಕ್ಕಳ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ ತಂದೆ-ತಾಯಿ

Webdunia
ಭಾನುವಾರ, 1 ಮೇ 2016 (16:42 IST)
ಆಸ್ತಿಗಾಗಿ ಮಕ್ಕಳೇ ವೃದ್ಧ ತಂದೆ-ತಾಯಿಗಳ ಮೇಲೆ ಹಲ್ಲೆ ನಡೆಸಿದ ಅಮಾನುಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
 
ಉತ್ತರಹಳ್ಳಿ ಬಳಿಯ ಅರೇಹಳ್ಳಿಯಲ್ಲಿ ಈ ಘಟನೆ ನಡೆದಿದ್ದು 86 ವರ್ಷದ ಗುರಪ್ಪ ಮತ್ತು ಅವರ ಪತ್ನಿ ವೆಂಕಟಮ್ಮ(76) ಅವರ ಮೇಲೆ ಮಕ್ಕಳೇ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ವೃದ್ಧ ವೆಂಕಟಮ್ಮ ಮತ್ತು ಅವರ ಪತಿಯ ಕೈಗೆ ಗಾಯಗಳಾಗಿವೆ. 
 
ಮಹೇಂದ್ರ & ಮಹೇಂದ್ರ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಗುರಪ್ಪ 2 ನಿವೇಶನ ಮತ್ತು 2 ಕಟ್ಟಡಗಳನ್ನು ಹೊಂದಿದ್ದಾರೆ. ಎರಡು ಕಟ್ಟಡಗಳಿಂದ ಒಟ್ಟು 40,000 ಬಾಡಿಗೆಯನ್ನು ಪಡೆಯುತ್ತಾರೆ. ತಮಗೆ ಆಸ್ತಿ ನೀಡುವಂತೆ ಒತ್ತಾಯಿಸಿ ಮಕ್ಕಳು ಕಳೆದ 5 ವರ್ಷದಿಂದ ಹಿಂಸೆ ನೀಡುತ್ತಿದ್ದು ಕಳೆದ 3 ದಿನಗಳ ಹಿಂದೆ ಕೊನೆಯ ಮಗ ರವಿ ಮತ್ತು ಅವರ ಸೊಸೆ ಹಲ್ಲೆ ನಡೆಸಿದ್ದಾರೆ ಎಂದು ಗುರಪ್ಪ ಮತ್ತು ಪತ್ನಿ ಆರೋಪಿಸಿದ್ದಾರೆ. 
 
ಐದು ಜನ ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೂ ಸಹ ತಮಗೆ ನರಕದರ್ಶನವಾಗುತ್ತಿದೆ. ಮಕ್ಕಳಿಂದ ನಮ್ಮನ್ನು ರಕ್ಷಿಸಿ ಎಂದು ವೃದ್ಧ ತಂದೆ ತಾಯಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 
ಆದರೆ ವೃದ್ಧ ತಂದೆ-ತಾಯಿಗಳು ವಿನಾಕಾರಣ ಅವರೇ ಮೈ ಕೈಗೆ ಗಾಯ ಮಾಡಿಕೊಂಡಿದ್ದಾರೆ. ನಾನೇನು ಮಾಡಿಲ್ಲ. ಅವರೇ ನಮ್ಮ ಮೇಲೆ ಶೋಷಣೆಯನ್ನು ಮಾಡುತ್ತಾರೆ ಎಂದು ವೃದ್ಧರ ಕೊನೆಯ ಮಗ ಆರೋಪಿಸುತ್ತಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments