Webdunia - Bharat's app for daily news and videos

Install App

ತಿಹಾರ್ ಜೈಲಿನಲ್ಲಿರುವ ಚೋಟಾ ರಾಜನ್‌ಗೆ ಚೋಟಾ ಶಕೀಲ್‌ನಿಂದ ಜೀವಬೆದರಿಕೆ

Webdunia
ಭಾನುವಾರ, 1 ಮೇ 2016 (16:22 IST)
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇಂಡೋನೇಶಿಯಾದಲ್ಲಿ ಬಂಧಿಸಲ್ಪಟ್ಟು ತಿಹಾರ್ ಜೈಲಿನಲ್ಲಿ  ಬಿಗಿ ಭದ್ರತೆಯ ನಡುವಿದ್ದರೂ ಭೂಗತ ಪಾತಕಿ ಚೋಟಾ ರಾಜನ್‌‌ಗೆ ಜೀವ ಬೆದರಿಕೆ ಮುಂದುವರೆದಿದೆ.
 
ಮತ್ತೊಬ್ಬ ಭೂಗತ ಪಾತಕಿ, ದಾವೂದ್ ಇಬ್ರಾಹಿಂ ಬಲಗೈ ಬಂಟ ಚೋಟ ಶಕೀಲ್ ಮತ್ತೆ ರಾಜನ್‌ಗೆ ಜೀವ ಬೆದರಿಕೆ ಹಾಕಿರುವ ಬಹಳ ತಡವಾಗಿ ಬೆಳಕಿಗೆ ಬಂದಿದೆ. 
 
ಚೋಟಾ ಶಕೀಲ್ ತನ್ನ ಮೊಬೈಲ್ ನಂಬರ್‌ನಿಂದ ತಿಹಾರ್ ಜೈಲಿನ ಹಿರಿಯ ಅಧಿಕಾರಿ ಸುನೀಲ್ ಗುಪ್ತಾ ಅವರಿಗೆ ಸಂದೇಶ ಕಳುಹಿಸಿದ್ದು, ಆದಷ್ಟು ಬೇಗ ರಾಜನ್‌ನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಹಿನ್ನೆಲೆಯಲ್ಲಿ ಬಂಧಿತ ಪಾತಕಿಗೆ ನೀಡಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ. 
 
ಎಷ್ಟು ದಿನಗಳ ಕಾಲ ಸತ್ತ ಹಂದಿಯನ್ನು ಸಾಯದಂತೆ ರಕ್ಷಿಸುತ್ತಿರಿ. ಆದಷ್ಟು ಬೇಗ ನಾನವನಿಗೆ ಅಂತ್ಯ ಮಾಡುತ್ತೇನೆ ಎಂದು ಶಕೀಲ್ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 24 ರಂದು ಈ ಸಂದೇಶ ಬಂದಿತ್ತು ಎಂದು ತಿಳಿದು ಬಂದಿದೆ
 
27 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಚೋಟಾ ರಾಜನ್ ಕಳೆದ ವರ್ಷ ಅಕ್ಟೋಬರ್ 25 ರಂದು ಬಾಲಿಯಲ್ಲಿ ಬಂಧಿಸಲ್ಪಟ್ಟಿದ್ದ. ನವೆಂಬರ್ 6 ರಂದು ಅವರನ್ನು ಭಾರತಕ್ಕೆ ತರಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments