Webdunia - Bharat's app for daily news and videos

Install App

ಮನೆಯವರನ್ನ ದೇವಸ್ಥಾನಕ್ಕೆ ಕಳುಹಿಸಿ, ಚಿನ್ನಾಭರಣ ದೋಚಿ ಎಸ್ಕೇಪ್

Webdunia
ಬುಧವಾರ, 26 ಜುಲೈ 2023 (19:05 IST)
ಮನುಷ್ಯನ ಸಮಸ್ಯೆಗಳನ್ನ ಬಂಡವಾಳ ಮಾಡಿಕೊಂಡಿರೋ ಕೆಲ ಜ್ಯೋತಿಷಿಗಳು ಜನರಿಗೆ ಪಂಗನಾಮ ಹಾಕ್ತಿದ್ದಾರೆ, ಇಲ್ಲೊಬ್ಬ ಐನಾತಿ ಜ್ಯೋತಿಷಿ ನಿಮ್ಮ ಮಗಳ  ಕಷ್ಟ, ಸಮಸ್ಯೆ ಗಳನ್ನ ಪರಿಹಾರ ಮಾಡುತ್ತೇನೆ ಎಂದು ನಂಬಿಸಿ ಎರಡು ಬಿಳಿ ಒಂದು ಕೆಂಪು ನಾಮ ಹಾಕಿ ಎಸ್ಕೇಪ್ ಆಗಿದ್ದಾನೆ.ಜನರ  ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡ ಅದೇಷ್ಟೋ ಮಂದಿ ಸರಿಯಾಗಿ ಟೋಪಿ ಹಾಕಿರೋದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಇಲ್ಲೋಬ್ಬ ಜ್ಯೋತಿಷಿ ಕೂಡ ಹಾಗೇ ಮಾಡಿದ್ದಾನೆ.ಇತನ ಹೆಸರು ಸುರೇಶ್ ಪಾಟೀಲ್ ಮೂಲತಃ ಹೊಸಪೇಟೆಯನು ಅಂಗೈ ನೋಡಿ ಶಾಸ್ತ್ರ ಹೇಳೋ ಅಸಾಮಿ. ಯಲಹಂಕ ಸಮೀಪ ಇದೇ ಕೆಲಸ ಮಾಡಿಕೊಂಡಿದ್ದ. ಅಳ್ಳಾಲಸಂದ್ರದ ನಿವಾಸಿ ಇಂದ್ರಮ್ಮ ಮನೆ ಕೆಲಸ ಮಾಡಿಕೊಂಡಿದ್ದು ಇತ್ತೀಚೆಗೆ ತಮ್ಮ ಮಗಳಿಗೆ  ಮದುವೆ ಮಾಡಿಕೊಟ್ಟಿರುತ್ತಾಳೆ ಆದ್ರೇ ಯಾಕೋ ಮಗಳ ಜೀವನದಲ್ಲಿ ‌ಹೊಂದಾಣಿಕೆಯಿಲ್ಲದೆ ಸಂಸಾರದಲ್ಲಿ ಯಾವಾಗಲೂ ಜಗಳ ಬೇಸೆತ್ತ ಮಗಳು ಕೂಡ ಗಂಡನ ಮನೆ ಬಿಟ್ಟು ತಾಯಿ ಇಂದ್ರಮ್ಮನ ಮನೆ ಸೇರಿದ್ಲು. 

 ಇನ್ನೂ ಮಗಳ ಜೀವನದ ಬಗ್ಗೆ ‌ಚಿಂತೆ ಮಾಡುತ್ತಿದ್ದಳು ಆಗ ಯಾರೋ ಸಂಬಂದಿಕರು ಜ್ಯೋತಿಷಿ ಸುರೇಶ್ ಪಾಟೀಲ್ ಬಗ್ಗೆ ಹೇಳಿದ್ದಾರೆ ಅಲ್ಲಿಗೆ ಹೋದಾಗ ನಿಮ್ಮ ಮನೆಯಲ್ಲಿ ‌ಆಮಾವಾಸ್ಸೆ ದಿನ ಪೂಜೆ ಮಾಡಿದ್ರೆ ಸರಿಹೋಗುತ್ತೆ ಪೂಜೆ ಮಾಡಿದ ಮೇಲೆ  ಆ ದಿನ ಮನೆಯಲ್ಲಿ ಯಾರು ಇರಬಾರದು ಅಂತ ಹೇಳಿದ್ದಾನೆ .ಎಲ್ಲರನ್ನೂ ದೇವಸ್ಥಾನ ಕ್ಮೆ ಕಳುಹಿಸಿ ರಾತ್ರಿ ಬಂದು ಮನೆಯಲ್ಲಿ ದ್ದ ಚಿ‌ನ್ನಾಭರಣ, ಐದು ಲಕ್ಷ ಹಣ ಕದ್ದು ಅದೇ ಜಾಗದಲ್ಲಿ ನಿಂಬೆಹಣ್ಣು ಇಟ್ಟು ಹೋಗಿದ್ದಾನೆ. ನಂತರ ಅವರಿಗೆ ಬೀರು ಬಾಗಿಲು ತೆಗೆದುನೋಡಿ ಎಂದು ಕೂಡ ಹೇಳಿದ್ದಾನೆ.ಇನ್ನೂ ಬೀರು ಓಪನ್ ಮಾಡಿದ್ರೆ ನಿಂಬೆಹಣ್ಣು ಇದೆ. ಇದು ನಿಮ್ಮ ಬೀಗರ ಕಿತಾಪತಿ ನನಗೆ 65 ದಿನ ಟೈಂ ಕೊಡಿ ನಾನು ಸರಿ ಮಾಡುತ್ತೇನೆಂದು ಹೇಳಿ ಹೋದವನು ಪೋನ್ ಸ್ವಿಚ್ ಆಪ್ ಆಗಿದೆ ಮತ್ತೆ ಬರ್ಲೆ ಇಲ್ಲ ಅನುಮಾನ ಗೊಂಡು ಯಲಹಂಕ ಠಾಣೆ ಗೆ ದೂರು ನೀಡಿದ್ದಾರೆ. ಪೋಲಿಸರು ಜ್ಯೋತಿಷಿ ಗಾಗಿ ಒಳ್ಳೆ ಟೈಂ ಗಾಗಿ ಕಾಯುತ್ತಿದ್ದಾರೆ.
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ಸುದ್ದಿ
Show comments