Select Your Language

Notifications

webdunia
webdunia
webdunia
webdunia

ಟೈಮ್ ನೋಡಿ ಅಸ್ತ್ರ ಬಿಡುವೆ ಎಂದ ಜಾಧವ್

ಖರ್ಗೆ
ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಶಾಸಕ ಜಾಧವ್ ರಾಜೀನಾಮೆ ಅಂಗೀಕಾರವಗದಿರುವ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ.

ಕಲಬುರಗಿಯಲ್ಲಿ ಬಿಜೆಪಿ ಸಂಭ್ಯಾವ ಲೋಕಸಭಾ ಅಭ್ಯರ್ಥಿ ಡಾ ಉಮೇಶ್ ಜಾಧವ್ ಹೇಳಿಕೆ ನೀಡಿದ್ದು, ಕಾನೂನಿನ ಪ್ರಕಾರ ನನ್ನ ರಾಜೀನಾಮೆ ಅಂಗೀಕಾರವಾಗುತ್ತೆ. ಬೆಂಗಳೂರಿನಿಂದ ದೆಹಲಿವರೆಗೆ ಈ ಬಗ್ಗೆ ಎಲ್ಲರನ್ನ ಕೇಳಿದಿನಿ. ಸ್ಪೀಕರ್ ರಮೇಶ್ ಕುಮಾರ ಯಾರ ಒತ್ತಡಕ್ಕೆ ಮಣಿಯುವುದಿಲ್ಲ ಅಂತಾ ಗೊತ್ತಿದೆ. ರಾಜೀನಾಮೆ ಅಂಗೀಕಾರ ಬಗ್ಗೆ ಕ್ಲಾರಿಫಿಕೆಶನ್ ಪಡೆಯುತ್ತಿದ್ದಾರೆ. ಮಾಚ್೯ 12 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದರು.

ಜಾಧವ್‌ರಂತಹ ನೂರು ಜನರನ್ನ ಸೃಷ್ಟಿಸುತ್ತೆವೆಂಬ ಸಚಿವ ಪ್ರೀಯಾಂಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೃಷ್ಟಿ ಮಾಡೋದು ಮೇಲಿರುವ ಸೃಷ್ಟಿಕರ್ತ. ಹಾಗೊಂದು ವೇಳೆ ಸೃಷ್ಟಿ ಮಾಡ್ತಿನಿ ಅಂದರೆ ದೇವರು ಒಳ್ಳೆಯದು ಮಾಡಲಿ ಎಂದರು.
ಲೋಕಸಭೆ ಚುನಾವಣೆ ಅಖಾಡದಲ್ಲಿ ಫೈಟ್ ಮಾಡೋಕೆ ಸನ್ನದ್ದನಾಗಿದ್ದೇನೆ. ನನ್ನ ಬಳಿ ಕೂಡ ಅಸ್ತ್ರಗಳಿವೆ. ಸಮಯ ಬಂದಾಗ ಪ್ರಯೋಗಿಸ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ & ಪ್ರೀಯಾಂಕ್ ಖರ್ಗೆ ವಿರುದ್ಧ ಜಾಧವ್ ವಾಗ್ದಾಳಿ ನಡೆಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕನ್ನ ಹಾಕಿದ ಭೂಪರು