ಮತ್ಸ್ಯ ದರ್ಶಿನಿಯಲ್ಲಿ ಸಿಗಲಿವೆ ಕಡಲ ಮೀನುಗಳು...!

Webdunia
ಬುಧವಾರ, 8 ಫೆಬ್ರವರಿ 2023 (19:35 IST)
ಮೀನು ಪ್ರಿಯರಿಗೆ  ಸಿಹಿ ಸುದ್ದಿಯೊಂದು ಸಿಕ್ಕಿದೆ.ಬೆಂಗಳೂರಿನಾದ್ಯಂತ 100 ಸ್ಥಳಗಳಲ್ಲಿ ಫಿಶ್ ಕ್ಯಾಂಟೀನ್ ಆರಂಭಿಸಲು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ.ಬೆಂಗಳೂರಿನ ಪ್ರತಿ ವಾರ್ಡ್ನಲ್ಲಿ ಈ ಫೀಶ್ ಕ್ಯಾಂಟೀನ್ ಪ್ರಾರಂಭಿಸಲು ಸರ್ಕಾರ ನಿರ್ಧರಿಸಲಾಗಿದೆ.ಆರಂಭಿಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಸಹಯೋಗದಲ್ಲಿ ಮೀನುಗಳನ್ನು ಮಾರಾಟ ಮಾಡುವುದರ ಜೊತೆಗೆ ಊಟವನ್ನು ಒದಗಿಸುವ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.ನಗರದ ಎಂಟು ಝೋನ್ ಗಳಲ್ಲಿ 100 ಫೀಶ್ ಕ್ಯಾಂಟೀನ್ ತೆರೆಯಲಿವೆ.ಇದಕ್ಕಾಗಿ ಮೀನುಗಾರಿಕೆ ಇಲಾಖೆಯಿಂದ ಸಿದ್ದತೆ ನಡೆದಿದೆ.ಈ ಕ್ಯಾಂಟೀನ್ಗಳಲ್ಲಿ ಸಂಪೂರ್ಣ ಮೀನಿನ ಊಟ ಸಿಗಲಿದೆ, ಫುಲ್ ಫಿಶ್ ಮೀಲ್ಸ್'ಗೆ 100 ರೂ. ನಿಗದಿಪಡಿಸಲಾಗುತ್ತಿದೆ  ಎಂದು ತಿಳಿದುಬಂದಿದೆ.
ಈ ಉಪಕ್ರಮದ ಮೂಲಕ ಇಲಾಖೆಯು ಯುವಕರಿಗೆ ಉದ್ಯೋಗ ಸೃಷ್ಟಿಸುವತ್ತ ಗಮನಹರಿಸುತ್ತಿದೆ. ಇದನ್ನು ಖಾಸಗಿ ಸಾರ್ವಜನಿಕ  ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಡೆಸಬೇಕೆ ಅಥವಾ ಸರ್ಕಾರದ ಅನುದಾನದ ಮೂಲಕ ನಡೆಸಬೇಕೆ ಎಂಬುದರ ಕುರಿತು ಚಿಂತನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಕ್ಯಾಂಟೀನ್ ಆರಂಭಿಸಿದ ಬಳಿಕ,  ಇತರೆ ಪ್ರದೇಶಗಳಲ್ಲಿ ಇದೇ ರೀತಿಯ ಕ್ಯಾಂಟೀನ್ಗಳನ್ನು ಆರಂಭಿಸಲಾಗುತ್ತದೆ, ಇದು ಶಾಶ್ವತ ಅಲ್ಲಾ ತಾತ್ಕಾಲಿಕವಾದ ಕಂಟೆನರ್ ಹಾಕಲಾಗುತ್ತದೆ. ಇದನ್ನು ಕೆಎಫ್ಡಿಸಿ ಮುಖಾಂತರ ತಾಜಾ ಮೀನುಗಳನ್ನು  ಸರಬರಾಜು ಮಾಡಲಾಗುತ್ತದೆ.ಇದ್ರಿಂದ ಬೆಂಗಳೂರಿಗರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಮೀನುಗಳನ್ನು ಸಿಗುತ್ತದೆ. ನೂರು ಕಂಟೆನರ್ಗಳನ್ನ ನಗರದ ವಿವಿಧ  ಜಾಗದಲ್ಲಿ ಅಳವಡಿಸಲಾಗುತ್ತದೆ. ಇಗಾಗ್ಲೇ ೧೧ ಜಾಗಗಳನ್ನು  ಗುರುತಿಸಲಾಗಿದೆ. ಈ ಫಿಶ್ ಕ್ಯಾಂಟನ್ ನಲ್ಲಿ ಬೆಳ್ಳಿಗ್ಗೆ ಮೀನುಗಳ ಮಾರಾಟ  ಮಾಡಲಾಗುತ್ತದೆ. ನಂತರ ಸಂಜೆ  ಹೊತ್ತಿನಲ್ಲಿ ಮೀನಿನಖಾದ್ಯಗಳು ಜನ್ರಿಗೆ ಸಿಗಲಿದೆ.

ಇನ್ನೂ 100 ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಸ್ಥಳ ಅಂತಿಮಗೊಳಿಸಲಾಗಿದೆ.ಇಲ್ಲಿಸಮುದ್ರದ ನಾನಾ ಬಗೆಯ ಮೀನುಗಳು ದೊರೆಯಲಿವೆ.ಇನ್ನೂ ಈ ಕ್ಯಾಂಟೀನ್ ನಲ್ಲಿ ಸೂಪ್, ಫಿಶ್ ಫ್ರೈ,ಫಿಶ್ ಕರಿ, ಫಿಶ್ ಕಬಾಬ್,ಅನ್ನ ಮತ್ತು ಉಪ್ಪಿನಕಾಯಿ ಸ್ಟಾರ್ಟಗ್ರಳು ಸೇರಿದಂತೆ 24 ಬಗೆಯ ಮೀನಿನ ಭಕ್ಷ್ಯಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನೂ ಈಗಾಗಲೇ ಕೆಲವೆಡೆ ಮೀನು ಹೋಟೆಲ್ ಗಳನ್ನು ಸರ್ಕಾರ ಆರಂಭಿಸಿದೆ.ಈ ಕ್ಯಾಂಟೀನ್ ಗಳು ಸಹ ಒಳ್ಳೆಯ ರೀತಿಯಿಂದ ನಡೆದುಕೊಂಡು ಬರ್ತಿವೆ.ಒಂದು ಪುಲ್ ಫೀಶ್ ಊಟಕ್ಕೆ ಸದ್ಯ 70 ರೂಪಾಯಿ ನಿಗದಿಗೊಳಿಸಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ, ಪಂಜಾಬ್, ಯುಪಿಯಲ್ಲಿ ತೀವ್ರ ಹೀಟ್‌ವೇವ್ ಎಚ್ಚರಿಕೆ

ರಾಹುಲ್ ಗಾಂಧಿ ಒಬ್ಬ ಪಾಕಿಸ್ತಾನಿ ಏಜೆಂಟ್: ನಿತೇಶ್ ರಾಣೆ

ನಟ ಧರ್ಮೇಂದ್ರರಿಗೆ ಮರಣೋತ್ತರ ಪದ್ಮವಿಭೂಷಣ: ಪ್ರಶಸ್ತಿ ಸ್ವೀಕರಿಸಿದ ಹೇಮಾ ಮಾಲಿನಿ

ಅಂಬೆನಾಲಿ ಘಾಟ್‌ನಲ್ಲಿ ಸಾವಿರ ಅಡಿ ಆಳದ ಕಣಿವೆಗೆ ಉರುಳಿದ ಕಾರು: ಎಂಟು ಯುವಕರು ದಾರುಣ ಸಾವು

ಬೆಳ್ತಂಗಡಿ ತಾಲ್ಲೂಕಿನ ಟ್ರೆಕ್ಕಿಂಗ್ ತಾಣಕ್ಕೆ ಹೋಗುವ ಪ್ಲಾನ್ ಮಾಡಿದ್ದವರಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments