Select Your Language

Notifications

webdunia
webdunia
webdunia
webdunia

ನಿನ್ನೆ ಊಟವನ್ನೇ ಮಾಡದ ಶಶಿಕಲಾ ನಟರಾಜನ್ ಗೆ ಇಂದು ತಿಂಡಿಗೆ ಪೊಂಗಲ್ ಬೇಕಂತೆ!

ನಿನ್ನೆ ಊಟವನ್ನೇ ಮಾಡದ ಶಶಿಕಲಾ ನಟರಾಜನ್ ಗೆ ಇಂದು ತಿಂಡಿಗೆ ಪೊಂಗಲ್ ಬೇಕಂತೆ!
Bangalore , ಗುರುವಾರ, 16 ಫೆಬ್ರವರಿ 2017 (12:42 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ನಟರಾಜನ್ ನಿನ್ನೆ ರಾತ್ರಿ ಊಟವನ್ನೇ ಮಾಡದೆ ಮೌನ ವ್ರತದಲ್ಲಿದ್ದ  ಅವರು ಇಂದು ಬೆಳಿಗ್ಗಿನ ತಿಂಡಿಗೆ ಪೊಂಗಲ್ ನೀಡಿ ಎಂದು ಬೇಡಿಕೆ ಇಟ್ಟಿದ್ದಾರಂತೆ!

 
ಸದ್ಯ ಜತೆಯಲ್ಲೇ ಇರುವ ಇಳವರಸಿ, ಸುಧಾಕರನ್ ಹಾಗೂ ಶಶಿಕಲಾ ಯಾರೊಂದಿಗೂ ಹೆಚ್ಚು ಬೆರೆಯುವ ಯತ್ನ ಮಾಡುತ್ತಿಲ್ಲ. ತಮ್ಮನ್ನು ಭೇಟಿ ಮಾಡಲು ಬಂದ ಕಾರ್ಯಕರ್ತರು, ಬೆಂಬಲಿಗರನ್ನು ಶಶಿಕಲಾ ಭೇಟಿಯಾಗಲು ನಿರಾಕರಿಸಿದ್ದಾರೆಂದು ವರದಿಯಾಗಿದೆ.

ಅತ್ತ ತಮಿಳುನಾಡಿನಲ್ಲಿ ಶಶಿಕಲಾ ಬಂಟ ಪಳನಿಸ್ವಾಮಿ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದು, ಪದವಿ ಸ್ವೀಕರಿಸಿದ ನಂತರ ಚಿನ್ನಮ್ಮನ ಭೇಟಿಗೆ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ಹಿಂದೆ ಜಯಲಲಿತಾ ಜೈಲಿಗೆ ಹೋಗಿದ್ದಾಗ ಪನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅಮ್ಮನ ಭೇಟಿಯಾಗಿ ಆಶೀರ್ವಾದ ಪಡೆದು ಹೋಗಿದ್ದರು. ಇದೀಗ ಪಳನಿಸ್ವಾಮಿ ಕೂಡಾ ಅದೇ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಳನಿ ಸ್ವಾಮಿಗೆ ಆಹ್ವಾನ, ಪನೀರ್ ಸೆಲ್ವಂ ಬಣದ ಬಂಡಾಯ ಠುಸ್!