Publish Date: Sun, 30 Jan 2022 (16:45 IST)
Updated Date: Sun, 30 Jan 2022 (17:48 IST)
ಸದಾಶಿವನಗರದ ಕಚೇರಿಯಲ್ಲಿನಿರ್ದೇಶಕ ಎಸ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನ ಭೇಟಿಯಾಗಿದ್ದಾರೆ. ಸೌಹಾರ್ದಯುತ ಮಾತುಕತೆ ನಡೆ ಸಿದ್ದು, ಉಭಯ ಕುಶಲೋಪರಿಗಾಗಿ ಭೇಟಿಯಾಗಿರುವುದು ತಿಳಿದು ಬಂದಿದೆ.
ಡಿ.ಕೆ. ಶಿವಕುಮಾರ್ ಜೊತೆ ನಿರ್ದೇಶಕ ಎಸ್. ನಾರಾ ಯಣ್ ಮಾತನಾಡುವಾಗ ಅವರ ಮಾತಿನ ಸಾರಂಶಗಳು ಕಾಂಸ್ ಪಕ್ಷದ ವಿಚಾರಗಳಿಗೆ ಸಂಬಂಧವಿದ್ದವು ಎಂಬ ಅನುಮಾನ ಗಳು ಇತರೆ ಪಕ್ಷದವರಿಗೆ ಕಾಡುತ್ತಿದೆ. ಇನ್ನು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಡಿ. ಕೆ. ಶಿ ಆಹ್ವಾನ ಕೊಟ್ಟಿದ್ದರು ಆದರೆ ಕಾಂಗ್ರೇಸ್ ಪಕ್ಷಕ್ಕೆ ಅಧಿಕೃತವಾಗಿ ಸೇರೋದ್ರ ಬಗ್ಗೆ ಎಸ್. ನಾರಾಯಣ್ ಇನ್ನೂ ಕೂಡ ನಿರ್ಧಾರ ತಿಳಿಸಿಲ್ಲ.