Select Your Language

Notifications

webdunia
webdunia
webdunia
webdunia

ರಾಜೀನಾಮೆ ರಾದ್ದಾಂತ: ಎಸ್.ಎಂ.ಕೃಷ್ಣ ಪರ ಎಚ್.ವಿಶ್ವನಾಥ್ ಬ್ಯಾಟಿಂಗ್

ರಾಜೀನಾಮೆ ರಾದ್ದಾಂತ: ಎಸ್.ಎಂ.ಕೃಷ್ಣ ಪರ ಎಚ್.ವಿಶ್ವನಾಥ್ ಬ್ಯಾಟಿಂಗ್
ಬೆಂಗಳೂರು , ಶನಿವಾರ, 28 ಜನವರಿ 2017 (18:59 IST)
ನಾನು ಎಸ್.ಎಂ.ಕೃಷ್ಣ ಅವರ ಬಹುದೊಡ್ಡ ಅಭಿಮಾನಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವೇಳೆ ಕೃಷ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಕಾಂಗ್ರೆಸ್ ನಾಯಕ ಎಚ್‌.ವಿಶ್ವನಾಥ್ ಹೇಳಿದ್ದಾರೆ.
 
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಎಸ್.ಎಂ.ಕೃಷ್ಣ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.
 
ಬೇಸರ ಮಾಡಿಕೊಂಡು ಪಕ್ಷ ತೊರೆಯುವುದು ಸರಿಯಲ್ಲ. ದಯವಿಟ್ಟು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಬೇಡಿ ಎಂದು ಕೃಷ್ಣರಲ್ಲಿ ಮನವಿ ಮಾಡಿಕೊಂಡರು.
 
ಕಾಂಗ್ರೆಸ್ ಪಕ್ಷಕ್ಕೆ ನಾಯಕರು ಹಾಗೂ ಮಾಲೀಕರು ಜನತೆ. ನಾಳೆ ಸುದ್ದಿಗೋಷ್ಠಿ ಕರೆದಿರುವ ಎಸ್.ಎಂ.ಕೃಷ್ಣ ಅವರು ಏನು ಹೇಳುತ್ತಾರೋ ಕಾದು ನೋಡೋಣ ಎಂದು ಕಾಂಗ್ರೆಸ್ ನಾಯಕ ಎಚ್‌.ವಿಶ್ವನಾಥ್ ಹೇಳಿದರು.
 
ಸಿಎಂ ಸಿದ್ದರಾಮಯ್ಯ ಹಾಗೂ ಮತ್ತಿತ್ತರ ಮುಖಂಡರ ನಡುವಳಿಕೆಯ ವಿರುದ್ಧ ಎಸ್.ಎಂ.ಕೃಷ್ಣ ಅವರು ಅಸಮಧಾನಗೊಂಡಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಎಸ್.ಎಂ.ಕೃಷ್ಣ