Select Your Language

Notifications

webdunia
webdunia
webdunia
webdunia

ಮೇಟಿ ರಾಸಲೀಲೆ: ಆರ್‌ಟಿಐ ಕಾರ್ಯಕರ್ತ ರಾಜಶೇಖರ್‌ಗೆ ಮಾಜಿ ಸೈನಿಕರ ಭದ್ರತೆ

ಮೇಟಿ ರಾಸಲೀಲೆ: ಆರ್‌ಟಿಐ ಕಾರ್ಯಕರ್ತ ರಾಜಶೇಖರ್‌ಗೆ ಮಾಜಿ ಸೈನಿಕರ ಭದ್ರತೆ
ಬಳ್ಳಾರಿ , ಗುರುವಾರ, 15 ಡಿಸೆಂಬರ್ 2016 (14:32 IST)
ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಸಿಡಿ ಬಹಿರಂಗಪಡಿಸಿದ್ದ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರ ಮನೆಗೆ ಮಾಜಿ ಸೈನಿಕರ ಸಂಘದ ಸದಸ್ಯರು ಸ್ವಯಂಪ್ರೇರಿತರಾಗಿ ಭದ್ರತೆ ಕಲ್ಪಿಸಿದ್ದಾರೆ.
 
ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಅವರಿಗೆ ಜೀವ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮಾಜಿ ಸೈನಿಕರು ರಾಜಶೇಖರ್ ಮನೆಗೆ ಸ್ವಯಂಪ್ರೇರಿತರಾಗಿ ಭದ್ರತೆ ನೀಡಿ ಕಾವಲು ಕಾಯುತ್ತಿದ್ದಾರೆ. 
 
ಬಳ್ಳಾರಿಯ ಕೆಎಂಎಫ್ ಬಳಿಯಿರುವ ರಾಜಶೇಖರ್ ನಿವಾಸಕ್ಕೆ ಇಬ್ಬರು ಪೊಲೀಸರು ಸಹ ಭದ್ರತೆಗೆಂದು ನಿಯೋಜನೆಗೊಂಡಿದ್ದಾರೆ. ಆದರೆ, ಸಚಿವರ ರಾಸಲೀಲೆ ಸಿಡಿ ಬಯಲು ಮಾಡಿದ ಪರಿಣಾಮ ನಿವೃತ್ತ ಸೈನಿಕರು ಭದ್ರತೆ ನೀಡುವ ಮೂಲಕ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
 
ಎಚ್.ವೈ.ಮೇಟಿ ರಾಸಲೀಲೆ ವಿಡಿಯೋ ಸಿಡಿಯನ್ನು ನಿನ್ನೆ ದೆಹಲಿಯಲ್ಲಿ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಬಿಡುಗಡೆಗೊಳಿಸಿದ್ದರು. ಸಚಿವರ ರಾಸಲೀಲೆ ಸಿಡಿ ಬಿಡುಗಡೆಯಾಗುತಿದ್ದಂತೆ ನೈತಿಕ ಹೊಣೆ ಹೊತ್ತು ಅಬಕಾರಿ ಸಚಿವ ಎಚ್.ವೈ.ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಟಿ ರಾಸಲೀಲೆ ರಾಜ್ಯವೇ ನಾಚಿಕೆ ಪಡುವಂತದ್ದು: ಪ್ರಮೋದ್ ಮುತಾಲಿಕ್