ಅಮಿತ್ ಶಾ ಕಾರ್ಯಕ್ರಮ ಅರಮನೆ ಮೈದಾನ ಸುತ್ತ ರಸ್ತೆ ಬದಲಿ ಮಾರ್ಗ

Webdunia
ಶುಕ್ರವಾರ, 1 ಏಪ್ರಿಲ್ 2022 (17:12 IST)
ಕೇಂದ್ರ ಗೃಹ ಸಚಿವ ಅಮಿತ್​ ಶಾ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಟ್ರಾಫಿಕ್​ ಜಾಮ್ ಆಗುವ ಸಾಧ್ಯತೆಯಿದೆ. ಹಾಗಾಗಿ, ಕಾರ್ಯಕ್ರಮಕ್ಕೆ ಬರುವ ಬಸ್, ಟೆಂಪೋ ಟ್ರಾವೆಲ್ಲರ್‌ ವಾಹನಗಳು ಬಳಸಬೇಕಾದ ರಸ್ತೆ ಮತ್ತು ಪಾರ್ಕಿಂಗ್ ಮಾಹಿತಿ
ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಹಕಾರ ಇಲಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಲಿದ್ದು, ಸಾಕಷ್ಟು ಅಭಿಮಾನಿಗಳು ಸೇರುವ ಹಿನ್ನೆಲೆಯಲ್ಲಿ ಅರಮನೆ ರಸ್ತೆಯಲ್ಲಿ ಸಂಚರಿಸಿದರೆ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಲಿದ್ದು ಬದಲಿ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಮೈಸೂರು ರಸ್ತೆ ಕಡೆಯಿಂದ ಬರುವ ಬಸ್‌ಗಳು, ಟೆಂಪೋಗಳು‌. ಮೈಸೂರು ರಸ್ತೆ - ನಾಯಂಡನಹಳ್ಳಿ - ಎಡ ತಿರುವು ಸುಮ್ಮನಹಳ್ಳಿ - ಡಾ. ರಾಜಕುಮಾರ್‌ ಸಮಾಧಿ ತುಮಕೂರು ರಸ್ತೆ - ಬಲ ತಿರುವು - ಗೊರಗುಂಟೆಪಾಳ್ಯ ಜಂಕ್ಷನ್ - ಎಡತಿರುವು - ಬಿ.ಇ.ಎಲ್, - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಸಾಗಿ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೆಂಥಾ ದುರವಸ್ಥೆ..ಅಜ್ಜಿಯನ್ನು ಬದುಕಿಸಲು ತಾವೇ ಸ್ಟ್ರೆಚರ್ ಎಳೆದ ಪುಟ್ಟ ಕಂದಮ್ಮಗಳು Video

ನನ್ನ ಅಮ್ಮನ ಸುದ್ದಿಗೆ ಬಂದ್ರೆ ಹುಷಾರ್.. ಪೊಲೀಸರಿಗೇ ಆವಾಜ್ ಹಾಕಿದ ಹುಡುಗ, ಅಮ್ಮ ಅಂದ್ರೆ ಹಾಗೇ ಅಲ್ವಾ video

ನಿನ್ ಜೊತೆ ಮಲ್ಕೋಬೇಕಾ ನಾನು... ಎನ್ನುತ್ತಾ ಮಂಚಕ್ಕೆ ಕರೆಯುತ್ತಿದ್ದ ಕಾಮಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ Video

ಕರ್ನಾಟಕದಲ್ಲಿ ಇಂದಿನಿಂದ ಮತಪರಿಷ್ಕರಣೆ: ಜನರಿಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಡಿಕೆ ಶಿವಕುಮಾರ್

ಕಿಕ್ ಔಟ್ ಮಾಡಿ ಎನ್ನುವಂತಹ ತಪ್ಪು ನಾನೇನು ಮಾಡಿದ್ದೆ.. ಸದಾನಂದ ಗೌಡರ ಬಗ್ಗೆ ವಿಜಯೇಂದ್ರಗೆ ಭಾರೀ ಬೇಸರ

ಮುಂದಿನ ಸುದ್ದಿ
Show comments