Select Your Language

Notifications

webdunia
webdunia
webdunia
webdunia

ಮುರುಘಾ ಮಠದ ಕಾರ್ಯವೈಖರಿ ಬಗ್ಗೆ ವರದಿ

ಮುರುಘಾ ಮಠದ ಕಾರ್ಯವೈಖರಿ ಬಗ್ಗೆ ವರದಿ
chitradurga , ಬುಧವಾರ, 16 ನವೆಂಬರ್ 2022 (16:48 IST)
ಮುರುಘಾ ಮಠದ ಶಿವಮೂರ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಹಿನ್ನೆಲೆ ಪೀಠದ ಕಾರ್ಯ ವೈಖರಿ ಹಾಗೂ ಅಲ್ಲಿನ ಸ್ಥಿತಿಗತಿಗಳ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು 5 ಪುಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ''ಸರ್ಕಾರದ ಆದೇಶದಂತೆ ವಾಸ್ತವಾಂಶದ ವರದಿ ಸಲ್ಲಿಸಿದ್ದೇನೆ. ವರದಿ ಪರಿಶೀಲಿಸಿ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ,'' ಎಂದು ಅವರು ತಿಳಿಸಿದರು. ಶಿವಮೂರ್ತಿಯ ಬಂಧನದ ನಂತರ ನವೆಂಬರ್‌ 4ರಂದು ಮಠದ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸರ್ಕಾರ ಸೂಚನೆ ನೀಡಿತ್ತು. ಇದೇ ವೇಳೆ, ''ಮಠದ ಎಲ್ಲ ಆಗು ಹೋಗುಗಳು ಸುಗಮವಾಗಿ ನಡೆಯುತ್ತಿರುವುದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಿಸುವುದು ಅನಗತ್ಯ,'' ಎಂದು ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ ಮಠದ ಮುಂದಿನ ಕಾರ್ಯವೈಖರಿಗಳ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಗೋಳಗುಮ್ಮಟ ಮೇಲಿಂದ ಜಿಗಿದು ಆತ್ಮಹತ್ಯೆ