Webdunia - Bharat's app for daily news and videos

Install App

ಸಚಿವ ಸವದಿಗೆ ಟಾಂಗ್ ಕೊಟ್ಟ ರೇಣುಕಾಚಾರ್ಯ; ಬಿಎಸ್ವೈಗೂ ಹೀಗೇ ಹೇಳೋದಾ

Webdunia
ಶನಿವಾರ, 24 ಆಗಸ್ಟ್ 2019 (17:26 IST)
ಚುನಾವಣೆಯಲ್ಲಿ ಸೋತವರು, ಸಂಕಷ್ಟದಲ್ಲಿ ಸಾಥ್ ಕೊಡದವರು, ಸಚಿವರಾಗಿ ನೀತಿ‌ ಪಾಠ ಹೇಳುತ್ತಿದ್ದಾರೆ.

ಆ ನೀತಿ ಪಾಠ ಹೇಳುವ ಅವಶ್ಯಕತೆ ಇಲ್ಲ. ಕೇಳುವ ಅಗತ್ಯ ನನಗಿಲ್ಲ. ಹೀಗಂಗ ಸಚಿವ ಲಕ್ಷ್ಮಣ್ ಸವದಿಗೆ ಶಾಸಕ ರೇಣುಕಾಚಾರ್ಯ ಪರೋಕ್ಷ ಟಾಂಗ್ ನೀಡಿದ್ದಾರೆ.

ಮಾಜಿ ಶಾಸಕ ಲಕ್ಷ್ಮಣ್ ಸವದಿಗೆ ಮಂತ್ರಿ ಸ್ಥಾನ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿರೋ ಅವರು, ನಾನು‌ ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ಬಂದು ಎದೆಗೆ ಒದ್ದಂರಂತೆ ಹಾಗಯಿತು ಇದು ಅಂತ ಪರೋಕ್ಷವಾಗಿ ವ್ಯಂಗ್ಯವಾಡಿದ್ರು.

ನಾನು ಮಂತ್ರಿಯಾಗಲು  ಬೆಗ್ ಮಾಡೋಲ್ಲ, ಅದರ ಅವಶ್ಯಕತೆ ಇಲ್ಲ. ನಾನು ಬಂಡೆಯಂತೆ ನಾನು ಕರಗಲ್ಲ. 
ಮಣ್ಣಿನ ಹೆಂಟೆ ಹೊಡೆಯುತ್ತೆ, ಬಂಡೆ ಬಂಡೆಯಾಗೆ ಇರುತ್ತದೆ. ದುರಾಹಂಕಾರ ಇಲ್ಲ. ಜನ ಈ ಮಟ್ಟಕ್ಕೆ ಬೆಳೆಸಿದ್ದಾರೆ ಅಂತ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಮೇಲಿದ್ದವರು ಕೆಳಗೆ ಬರ್ತಾರೆ. ಕೆಳಗಿದ್ದವರು ಮೇಲೆ ಹೋಗ್ತಾರೆ. ಎಲ್ಲವನ್ನು ಸ್ವೀಕರಿಸುವ ಮನಸ್ಥಿತಿ ಇರಬೇಕು, ಇದೊಂದು ಗೇಮ್ ಅಂತ ಹೇಳೋ ಮೂಲಕ ಯಡಿಯೂರಪ್ಪರ ನಡೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments