Select Your Language

Notifications

webdunia
webdunia
webdunia
webdunia

ಎಚ್.ಕೆ.ಪಾಟೀಲ್‌ರನ್ನು ವಜಾಗೊಳಿಸುಂತೆ ಸ್ವ ಪಕ್ಷದವರಿಂದಲೇ ಒತ್ತಡ!

ಎಚ್.ಕೆ.ಪಾಟೀಲ್‌ರನ್ನು ವಜಾಗೊಳಿಸುಂತೆ ಸ್ವ ಪಕ್ಷದವರಿಂದಲೇ ಒತ್ತಡ!
ಬೆಂಗಳೂರು , ಸೋಮವಾರ, 22 ಆಗಸ್ಟ್ 2016 (10:52 IST)
ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಅಸಮರ್ಥ ನಿರ್ವಹಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಎಚ್‌.ಕೆ.ಪಾಟೀಲ್ ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಶಾಸಕರೇ ಒತ್ತಾಯಿಸಿದ್ದರೆ.
 
ಸರಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ದುರಪಯೋಗ ಹಾಗೂ ಕಳಪೆ ಸಾಧನೆ ಮಾಡಿಕೊಳ್ಳುವ ಮೂಲಕ ಸರಕಾರಕ್ಕೆ ಕೆಟ್ಟ ಹೆಸರು ತರುತ್ತಿರುವ ಸಚಿವ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್‌.ಕೆ.ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸ್ವ ಪಕ್ಷದ ಹಲವು ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರುತ್ತಿದ್ದಾರೆ.
 
ಇಲಾಖೆಯಲ್ಲಿ ಸಾವಿರಾರು ಕೋಟಿ ರೂಪಾಯಿ ದುರುಪಯೋಗವಾಗಿದ್ದರು ಕ್ರಮ ಕೈಕೊಂಡಿಲ್ಲ. ಶೌಚಾಲಯ ನಿರ್ಮಾಣ ಮಾಡುವಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರು ಕಳಪೆ ಸಾಧನೆ ಮಾಡುವ ಮೂಲಕ ಈ ಇಲಾಖೆಗೆ ತಾವು ಅಸಮರ್ಥ ಎಂದು ಸಾಬೀತು ಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ 50 ಕ್ಕೂ ಹೆಚ್ಚು ಶಾಸಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆಗೆ ಯತ್ನಿಸಿದವಳ ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ್ದನ್ನು ನೋಡಿ(ವಿಡಿಯೋ)