Select Your Language

Notifications

webdunia
webdunia
webdunia
webdunia

ಬಂಧಿತ ರೈತರ ಬಿಡುಗಡೆಗೆ ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ

ಮಹದಾಯಿ ಹೋರಾಟ
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2016 (16:43 IST)
ಮಹದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾದ ರೈತರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.
 
ಜೆಡಿಎಸ್ ಎಂಎಲ್‌ಸಿ ಟಿ.ಶರವಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಕಂಠೀರವ ಸ್ಟೇಡಿಯಂ ಹಾಗೂ ಡಾ. ರಾಜ್ ಸ್ಮಾರಕದ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಕಾರ್ಪೊರೇಟರ್ ಮಂಜುಳಾ ಸೇರಿದಂತೆ ಹಲವು ಸದಸ್ಯರು ಸಾಥ್ ನೀಡಿದ್ದರು.
 
ಬಂಧನಕ್ಕೊಳಗಾದ ಅಮಾಯಕ ರೈತರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ರಾಜಭವನದವರೆಗೂ ಪಾದಯಾತ್ರೆ ಕೈಗೊಂಡಿದ್ದರು. ಆದರೆ, ಪೊಲೀಸರು ಅವಕಾಶ ನೀಡದ ಕಾರಣ ಡಾ. ರಾಜ್ ಸ್ಮಾರಕದ ಎದುರೇ ಪ್ರತಿಭಟನೆ ನಡೆಸಲು ಮುಂದಾದದರು.
 
ಈ ವೇಳೆ ಪೊಲೀಸರು ಹಾಗೂ ಜೆಡಿಎಸ್ ಎಂಎಲ್‌ಸಿ ಟಿ.ಶರವಣ ಅವರ ಮಧ್ಯೆ ವಾಗ್ವಾದವು ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಟಿ.ಶರವಣ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ದೌರ್ಜನ್ಯ: ವಾಟಾಳ್ ನಾಗರಾಜ್ ಆಕ್ರೋಶ