ಆರ್ ಟಿ ಇ ಸೀಟುಗಳಿಗೆ ತಗ್ಗಿದ ಬೇಡಿಕೆ

Webdunia
ಸೋಮವಾರ, 15 ಆಗಸ್ಟ್ 2022 (15:23 IST)
ಒಂದು ಕಾಲದಲ್ಲಿ ಆರ್ ಟಿ ಇ ಸೀಟ್ ಸಿಗುವುದೇ ಭಾಗ್ಯ ಅಂತಿದ್ರು. ಆರ್ ಟಿ ಇ ಸೀಟ್ ಸಿಕ್ರೆ ಸಾಕಪ್ಪ ಅಂತಾ ಪೋಷಕರು ಕ್ಯೂ ನಲ್ಲಿ ನಿಂತು ಕಾಯ್ತಿದ್ರು. ಆದ್ರೆ ಈಗ ಆರ್ ಟಿ ಇ ಸೀಟ್ ಸಿಕ್ರು ಮಕ್ಕಳನ್ನ ಅಡ್ಮೀಷನ್  ಮಾಡಿಸುವುದಕ್ಕೆ ಪೋಷಕರು ಮೀನಾಮೇಷ ಏಣಿಸುತ್ತಿದ್ದಾರೆ. ಆರ್ ಟಿ ಇ ಅಡಿಯಲ್ಲಿ ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸಲು ಹಿಂದೇಟುಹಾಕ್ತಿದ್ದಾರೆ.

ಆರ್ ಟಿ ಇ ಅಡಿಯಲ್ಲಿ ಮಕ್ಕಳಿಗೆ ಸೀಟ್ ಸಿಕ್ರೆ ಮಕ್ಕಳ ಸಂಪೂರ್ಣ ಖರ್ಚನ್ನ ಸರ್ಕಾರ ಭರಿಸುತ್ತೆ ಅಂತಾ ಎಷ್ಟೋ ಪೋಷಕರು  ಆಡ್ಮೀಷನ್ ಮಾಡಬೇಕೆಂದುಕೊಂಡಿರುತ್ತಾರೆ. ಆದ್ರೆ ಈಗ ಆರ್ ಟಿ ಇ ಅಡಿಯಲ್ಲಿ ಮಕ್ಕಳಿಗೆ ಸೀಟ್ ಸಿಕ್ರು ಪೋಷಕರು ಆಡ್ಮೀಷನ್ ಮಾಡಿಸಲ್ಲ ಅಂತಾ ಹಿಂದೇಟು ಹಾಕ್ತಿದ್ದಾರೆ. ಅಂದಹಾಗೆ ಸರ್ಕಾರ ಅನುದಾನಿತ ಶಾಲೆಗಳನ್ನ ಆರ್ ಟಿ ಇ ವ್ಯಾಪ್ತಿಗೆ ತಂದನಂತರ ಸೀಟುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಪೋಷಕರು ಮನೆ ಹತ್ತಿರದಲ್ಲಿಯೇ ಮಕ್ಕಳನ್ನ  ಶಾಲೆಗೆ ಸೇರಿಸಬೇಕೆಂದು ನಿರ್ಧಾರ ಮಾಡಿರುತ್ತಾರೆ . ಈ ಎರಡು ಕಾರಣಗಳಿಂದ ಪೋಷಕರು ಆರ್ ಟಿ ಇ ಅಡಿಯಲ್ಲಿ ಮಕ್ಕಳನ್ನ ಶಾಲೆಗೆ ಸೇರಿಸಲು ನಿರಾಕರಿಸುತ್ತಿದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಆರ್ ಟಿ ಇ ಅಡಿ ಲಭ್ಯವಿರುವ ಸೀಟುಗಳ ಸಂಖ್ಯೆ ಹೆಚ್ಚಿದ್ರು ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಮಾತ್ರ ಗಣನೀಯವಾಗಿ ಇಳಿಕೆಯಾಗ್ತಿದೆ.

ಈಗ ಲಭ್ಯವಿರುವ ಆರ್ ಟಿ ಇ ಸೀಟ್ ಗಳು
 
ಒಟ್ಟು ಸೀಟುಗಳು 16, 824
 
ಸಲ್ಲಿಕೆಯಾದ ಅರ್ಜಿ 20, 414
 
ಪುರಸ್ಕೃತವಾದ ಅರ್ಜಿ  9953
 
ಪ್ರವೇಶ ಪಡೆದವರು 3844

ಈ ಬಾರಿ ಆರ್ ಟಿ ಇ ಅಡಿಯಲ್ಲಿ  ಮಕ್ಕಳನ್ನ ಶಾಲೆಗೆ ಸೇರಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ ಟಿ ಇ ಅಡಿ ಪ್ರವೇಶ ಪಡೆದ ಮಕ್ಕಳ ಶುಲ್ಕ ಸರ್ಕಾರವೇ ಭರಿಸುತ್ತಿತ್ತು. ಆದ್ರೆ ಈಗ ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಮಕ್ಕಳ ಶುಲ್ಕ ಭರಿಸುವುದೇ ಸರ್ಕಾರಕ್ಕೆ ಹೊರೆಯಾಗಿದೆ. ಹೀಗಾಗಿ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಇದರಿಂದ ಪೋಷಕರಿಗೆ ಬೇಸರವಾಗಿದೆ.ಮಕ್ಕಳಿಗೆ ಸೀಟು ಸಿಕ್ರು ಶಾಲೆಯ ವ್ಯವಸ್ಥೆ ನೋಡಿ ಪೋಷಕರು  ಮಕ್ಕಳನ್ನ ಶಾಲೆಗೆ ಕಳಿಸಲ್ಲ ಅಂತಾ ನಿರಾಕರಣೆ ಮಾಡ್ತಿದ್ದಾರೆ. ಹೀಗಾಗಿ ನಗರದ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಸೀಟು ಖಾಲಿ ಒಡೆಯುತ್ತಿದೆ.ಸೀಟ್ ಇದ್ರು ಮಕ್ಕಳಿಗೆ ಮಾತ್ರ  ಉಪಯೋಗ ಇಲ್ಲದಂತಾಗಿದೆ. ಇದ್ದರಿಂದ  ಆ ಕಡೆ ಹಾವು ಸಾಯಬಾರದು ಈ ಕಡೆ ಕೊಲುಮುರಿಬಾರದು ಅನ್ನುವಾಗೆ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೆಲ್ಲ ದಲಿತ ಸಚಿವರ ಹೆಸರು ಕೆಡಿಸಲು ಪ್ರಯತ್ನ: ಡಿಕೆ ಶಿವಕುಮಾರ್

ವಲಸೆ ಬಂದ ಹಕ್ಕಿಗಳಿಗೆ ಹೀಗಾಗುವುದಾ, ಅಸ್ಸಾಂ ಜಿಲ್ಲೆಯಲ್ಲಿ ನಿಜವಾಗ್ಲೂ ಆಗಿದ್ದೇನು

ಹೆಂಡ್ತಿ ಜತೆ ರೋಮ್ಯಾಂಟಿಕ್ ರೀಲ್ ಮಾಡಲು ಹೋಗಿ ಸಂಕಷ್ಟ ತಂದುಕೊಂಡ ಪೊಲೀಸ್ ಅಧಿಕಾರಿ, ಆಗಿದ್ದೇನು ಗೊತ್ತಾ

ಆಸಕ್ತಿ ತೋರಿರುವ, ತೋರದವರ ಬಗ್ಗೆ ಎಐಸಿಸಿಗೆ ಲಿಖಿತ ಮಾಹಿತಿ: ಡಿಕೆ ಶಿವಕುಮಾರ್, Video

ನಿಪಾ ವೈರಸ್ ಹರಡುವಿಕೆ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ

ಮುಂದಿನ ಸುದ್ದಿ
Show comments